Advertisement

ಇಂದು, ನಾಳೆ ಕ್ರೀಡಾಪಟುಗಳಿಗೆ ಲಸಿಕೆ

05:13 PM Jun 10, 2021 | Team Udayavani |

ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಲಸಿಕೆ ನೀಡುವ ಸಂಬಂಧ ಆದ್ಯತಾವಲಯಕ್ಕೆ ಸೇರ್ಪಡೆ ಮಾಡಲಾಗಿದೆ.

Advertisement

18 ವರ್ಷ ಮೇಲ್ಪಟ್ಟ2,200 ಕ್ರೀಡಾಪಟುಗಳು ಲಸಿಕೆಗಾಗಿ ನೋಂದಾಯಿಸಿಕೊಂಡಿದ್ದು ಗುರುವಾರ ಮತ್ತು ಶುಕ್ರವಾರನಗರದ ಕಂಠೀರವ ಕ್ರೀಡಾಂಗಣದಲ್ಲಿ ಲಸಿಕೆ ಹಾಕಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಿಳಿಸಿದೆ.

ಕ್ರೀಡಾಪಟುಗಳ ಲಸಿಕೆಅಭಿಯಾನಕ್ಕೆ ಸಚಿವ ನಾರಾಯಣಗೌಡ ಚಾಲನೆನೀಡಲಿದ್ದು ಮೊದಲ ದಿನ ಬಾಸ್ಕೆಟ್‌ ಬಾಲ್‌, ಈಜು,ಹಾಕಿ, ಬ್ಯಾಡ್ಮಿಂಟನ್‌ ಪಟುಗಳಿಗೆ ಲಸಿಕೆ ನೀಡಲಾಗುವುದು.ಶುಕ್ರವಾರ ಶೂಟಿಂಗ್‌, ಹ್ಯಾಂಡ್‌ಬಾಲ್‌, ಫ‌ುಟ್‌ಬಾಲ್‌,ಟೆನ್ನಿಸ್‌, ವಾಲಿಬಾಲ್‌ ಕ್ರೀಡಾಪಟುಗಳಿಗೆ ಲಸಿಕೆನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next