Advertisement

ಸೋಮಣ್ಣ “ಕೈ’ಹಿಡಿತಾರಾ?

06:25 AM Mar 28, 2019 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಸಂಬಂಧ ಮಾಜಿ ಸಚಿವ ವಿ.ಸೋಮಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ
ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಅವರು, ಅಡ್ಡಗೋಡೆ ಮೆಲೆ ದೀಪವಿಟ್ಟಂತೆ
ಮಾತನಾಡಿರುವುದು ಕುತೂಹಲ ಮೂಡಿಸಿದೆ.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿ.ಸೋಮಣ್ಣ
ಅವರು ಕಾಂಗ್ರೆಸ್‌ ಸೇರುತ್ತಾರೆ ಎನ್ನುವ ವದಂತಿಗಳಿಗೆ ನಾನು ಏನೂ ಹೇಳುವುದಿಲ್ಲ.
ಆದರೆ, ರಾಜಕೀಯದಲ್ಲಿ ನಾವು ಎಲ್ಲರನ್ನೂ ಸಂಪರ್ಕಿಸುತ್ತೇವೆ. ನಮ್ಮ ಮಿತ್ರರು, ಶತ್ರುಗಳು ಎಲ್ಲರನ್ನೂ ಸಂಪರ್ಕಿಸುತ್ತೇವೆ. ಚುನಾವಣೆಯ ನಂತರ ಮತಪೆಟ್ಟಿಗೆ ಓಪನ್‌ ಆದ ಮೇಲೆಯೇ ಎಲ್ಲ ಸತ್ಯ ತಿಳಿಯುವುದು’ ಎಂದು ಸೂಕ್ಷ್ಮವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next