Advertisement

Uttar Pradesh;ಬೆಂಕಿ ವದಂತಿ: ರೈಲಿನಿಂದ ಹಾರಿದ 12 ಮಂದಿಗೆ ಗಾಯ

12:22 AM Aug 12, 2024 | Team Udayavani |

ಹೊಸದಿಲ್ಲಿ: ಬೆಂಕಿ ಬಿದ್ದಿದೆ ಎಂದು ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದರಿಂದ ಗಾಬರಿಗೊಂಡು ಚಲಿಸುತ್ತಿದ್ದ ರೈಲಿನಿಂದ ಜಿಗಿದು 12 ಮಂದಿ ಗಾಯಗೊಂಡಿದ್ದಾರೆ. ಉತ್ತರಪ್ರದೇಶದ ಬಿಲಾಸ್‌ಪುರದಲ್ಲಿ ಈ ಘಟನೆ ನಡೆದಿದೆ. ಹೌರಾದಿಂದ ಅಮೃತಸರಕ್ಕೆ ಚಲಿಸುತ್ತಿದ್ದ ರೈಲಿನ ಕೋಚ್‌ನಲ್ಲಿ ಈ ಘಟನೆ ನಡೆದಿದೆ. ರೈಲಿನಲ್ಲಿ ಬೆಂಕಿ ಬಿದ್ದಿದೆ ಎಂದು ಕೆಲವರು ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಗಾಬರಿಗೊಂಡ ಕೆಲವರು ಚೈನ್‌ ಎಳೆದಿದ್ದಾರೆ. ಅದಕ್ಕೆ ಪೂರಕವಾಗಿ ರೈಲು ಚಲಿಸುತ್ತಿರುವಾಗಲೇ ಕೆಳಕ್ಕೆ ಧುಮುಕಿದ್ದರಿಂದ 12 ಮಂದಿಗೆ ಗಾಯಗಳಾಗಿವೆ. ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

ಉತ್ತರ ಪ್ರದೇಶ: ಹಳಿ ತಪ್ಪಿದ ಕಲ್ಲಿದ್ದಲು ಸಾಗಣೆ ರೈಲು
ಉತ್ತರಪ್ರದೇಶದ ಸೋನಭದ್ರದಲ್ಲಿ ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ಸಾಗಣೆ ರೈಲು ಹಳಿ ತಪ್ಪಿದೆ. ನಾರ್ತರ್ನ್ ಕೋಲ್‌ಫೀಲ್ಡ್‌ ಲಿಮಿ ಟೆಡ್‌ ಎಂಬ ಸಂಸ್ಥೆಯ ಅನ್‌ಪರ ಎಂಬಲ್ಲಿರುವ ವಿದ್ಯುತ್‌ ಸ್ಥಾವರಕ್ಕೆ ಕಲ್ಲಿದ್ದಲು ತೆಗೆದು ಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಸೋವು ನೋವು ಉಂಟಾಗಿಲ್ಲ. ಶೀಘ್ರವೇ ಹಳಿ ದುರಸ್ತಿ ಮಾಡ ಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next