Advertisement

Padubidri: ಸ್ಕೂಟಿಗೆ ವ್ಯಾಗನಾರ್‌ ಕಾರು ಢಿಕ್ಕಿ: ಸವಾರನಿಗೆ ಗಾಯ

08:59 PM Sep 14, 2024 | Team Udayavani |

ಪಡುಬಿದ್ರಿ: ತೆಂಕ ಗ್ರಾಮದ ನಾರಾಳ್ತಾಯ ಗುಡಿಯ ಬಳಿ ಸೆ. 14ರಂದು ಮಧ್ಯಾಹ್ನದ ವೇಳೆ ಸ್ಕೂಟಿಗೆ ಹಿಂದಿನಿಂದ ಮಾರುತಿ ವ್ಯಾಗನಾರ್‌ ಕಾರು ಢಿಕ್ಕಿಯಾಗಿ ಸ್ಕೂಟಿ ಸವಾರ ಉಡುಪಿ ಚಿಟ್ಪಾಡಿ  ನಿವಾಸಿ ನಿತಿನ್‌(39) ಎಂಬವರಿಗೆ ತೀವ್ರ ಗಾಯಗಳಾಗಿವೆ.

Advertisement

ಪಡುಬಿದ್ರಿಯತ್ತ ಬರುತ್ತಿದ್ದ ಸ್ಕೂಟಿಯನ್ನು ಸವಾರ ನಾರಾಳ್ತಾಯ ಗುಡಿ ಬಳಿ ಯೂಟರ್ನ್ ತೆಗೆದು ಉಚ್ಚಿಲದತ್ತ ಮರಳಿ ತೆರಳುತ್ತಿದ್ದಾಗ ಮಂಗಳೂರು ಕಡೆಯಂದ ಕಾಪುವಿನತ್ತ ಹೋಗುತ್ತಿದ್ದ ವ್ಯಾಗನಾರ್‌ ಕಾರು ಢಿಕ್ಕಿಯಾಗಿದೆ. ಪರಿಣಾಮವಾಗಿ ಸ್ಕೂಟಿ ಸವಾರ ನಿತಿನ್‌ಎಂಬವರಿಗೆ ತಲೆ ಹಾಗೂ ಮುಖಗಳಿಗೆ ಗಾಯಗಳಾಗಿವೆ. ಗಾಯಾಳುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next