Advertisement

Search Operation: ರಕ್ಷಣೆಗೆ 10,000 ಕೇಳಿದ ಮುಳುಗು ತಜ್ಞರು: ಅಧಿಕಾರಿ ನೀರುಪಾಲು!

01:45 AM Sep 03, 2024 | Team Udayavani |

ಹೊಸದಿಲ್ಲಿ: ಗಂಗಾ ನದಿಯಲ್ಲಿ 2 ದಿನಗಳ ಹಿಂದೆ ಮುಳುಗಿ ನಾಪತ್ತೆಯಾಗಿರುವ ಉತ್ತರ ಪ್ರದೇಶದ ಸರಕಾರಿ ಅಧಿಕಾರಿ ವರ್ಧನ್‌ ಸಿಂಗ್‌ಗಾಗಿ ಸೋಮವಾರವೂ ಶೋಧ ಮುಂದುವರಿದಿದೆ.

Advertisement

ಈ ನಡುವೆ ಅಧಿಕಾರಿಯನ್ನು ರಕ್ಷಿಸಲು ಅವಕಾಶವಿದ್ದರೂ ಮುಳುಗುತಜ್ಞರು 10,000 ರೂ. ಗೆ ಬೇಡಿಕೆಯಿಟ್ಟಿದ್ದರು. ಪಾವತಿ ಮಾಡುವುದರೊಳಗೆ ಅಧಿಕಾರಿ ಕೊಚ್ಚಿ ಹೋಗಿದ್ದಾರೆ ಎಂದು ಸ್ನೇಹಿತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ವಾರಾಣಸಿಯಲ್ಲಿ ನಿಯೋಜನೆಗೊಂಡಿರುವ ಲಕ್ನೋ ಮೂಲದ ಅಧಿಕಾರಿಯೊಬ್ಬರು ಈ ಬಗ್ಗೆ ಪೋಸ್ಟ್‌ ಮಾಡಿ ದ್ದು, ವರ್ಧನ್‌ ಸಿಂಗ್‌ ನೀರಿ ನಲ್ಲಿ ಮುಳುಗುತ್ತಿದ್ದಾಗ ಅಲ್ಲಿಯೇ ಬೋಟ್‌ನಲ್ಲಿದ್ದ ಮುಳುಗು ತಜ್ಞ ರನ್ನು ಕೇಳಿ ಕೊಂಡೆವು. ಆದರೆ ಅವರು ರಕ್ಷ ಣೆಗೂ ಮೊದಲು 10 ಸಾವಿರ ರೂ.ಗೆ ಬೇಡಿಕೆ ಇಟ್ಟರು.

ನಮ್ಮ ಬಳಿ ನಗದು ಇಲ್ಲ ಎಂದಾ, ಆನ್‌ಲೈನ್‌ ಪಾವತಿಗೆ ಪಟ್ಟು ಹಿಡಿದರು. ಕೊನೆಗೆ ಆನ್‌ ಲೈನ್‌ ಪಾವತಿ ಮಾಡುವುದರೊಳಗೆ ಸ್ನೇಹಿತ ನಾಪತ್ತೆಯಾಗಿದ್ದಾನೆ ಎಂದಿದ್ದಾರೆ. ಆದರೆ ಈ ಬಗ್ಗೆ ಬಿಲಾ ಹೌರ್‌ ಎಸಿಪಿ ಅಜಯ್‌ ಕುಮಾರ್‌ ತ್ರಿವೇದಿ ಪ್ರತಿಕ್ರಿಯಿಸಿ, ಮುಳುಗುತಜ್ಞರು ತಮ್ಮ ಸ್ಟೀಮರ್‌ಗೆ ಇಂಧನ ಹಾಕಿಸಿಕೊಳ್ಳಲು ಹಣ ಕೇಳಿದ್ದಾರೆಂದು ತಿಳಿ ದು ಬಂದಿದೆ. ಒಂದು ವೇಳೆ ಈ ಆರೋಪ ನಿಜ ವಾ ದರೆ ಅವರ ಮೇಲೆ ಕಾನೂನು ಕ್ರಮ ವನ್ನು ತೆಗೆದುಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next