Advertisement

ಪ್ರಧಾನಮಂತ್ರಿ ಆವಾಸ್‌ ಯೋಜನೆ ಕಳಪೆ ಸಾಧನೆ ಖಾದರ್‌ ಆಕ್ರೋಶ

09:52 AM Mar 10, 2020 | sudhir |

ಬೆಂಗಳೂರು: ಕೆಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ರಾಜ್ಯ ಸರ್ಕಾರ ಕಳಪೆ ಸಾಧನೆ ಮಾಡಿರುವ ಬಗ್ಗೆ ಮಾಜಿ ಸಚಿವ ಯು.ಟಿ. ಖಾದರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಬಡವರಿಗೆ ಸೂರು ಕಟ್ಟಿಕೊಡಬೇಕು. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇಕಡಾ 50 ರಷ್ಟು ಹಣ ನೀಡಬೇಕು. 2019-20 ನೇ ಸಾಲಿನಲ್ಲಿ ಆಯ್ಕೆಯಾಗಿದ್ದ 41 ಸಾವಿರ ಫ‌ಲಾನುಭವಿಗಳಲ್ಲಿ ಕೇವಲ 21 ಮನೆಗಳನ್ನು ಮಾತ್ರ ಪೂರ್ಣಗೊಳಿಸಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ. ಕನಿಷ್ಠ 20 ಸಾವಿರ ಮನೆಗಳನ್ನಾದರೂ ನಿರ್ಮಾಣ ಮಾಡಿರಬೇಕಿತ್ತು ಎಂದು ವಾಗ್ಧಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅದರೊಂದಿಗೆ ಇಚ್ಚಾ ಶಕ್ತಿಯ ಕೊರತೆ ಇರುವುದರಿಂದ ಬಡವರ ಪರ ಯೋಜನೆ ಮೂಲೆಗುಂಪಾಗಿದೆ. ರಾಜ್ಯ ಸರ್ಕಾರ ಜನರ ಸಮಸ್ಯೆ ಬಗೆ ಹರಿಸುವ ಬದಲು ಅವರ ಆಂತರಿಕ ತಿಕ್ಕಾಟ ಬಗೆ ಹರಿಸುವುದರಲ್ಲಿಯೇ ಹೆಚ್ಚು ಸಮಯ ಮೀಸಲಿಟ್ಟಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next