Advertisement

ಮಣ್ಣಿನ ಫಲವತ್ತತೆಗೆ ಸಾವಯವ ಗೊಬ್ಬರ ಬಳಸಿ

02:51 PM Jun 04, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಕೃಷಿವಿಜ್ಞಾನ ಕೇಂದ್ರ, ಎನ್‌ಡಿಪಿ- ಉನ್ನತಿ ಹಾಗೂ ಧಾರವಾಡಕೃಷಿ ವಿವಿಯಿಂದ ಗ್ರಾಮೀಣ ಯುವಕ ಹಾಗೂಮಹಿಳೆಯರಿಗೆ ಸಾವಯವ ಗೊಬ್ಬರ, ಎರೆ ಹುಳುಗೊಬ್ಬರ ಉತ್ಪಾದನೆ ಕುರಿತು ಆನ್‌ಲೈನ್‌ ಕಾರ್ಯಾಗಾರನಡೆಯಿತು.

Advertisement

ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಡಾ.ಪಿ.ವೀರನಾಗಪ್ಪ ಮಾತನಾಡಿ, ಸಾವಯವ ಗೊಬ್ಬರಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ, ಪರಿಸರಸುರಕ್ಷತೆಗೆ ಸಹಕಾರಿಯಾಗುತ್ತದೆ.

ಸಾವಯವ ಗೊಬ್ಬರತಯಾರಿಕೆಗೆ ಸರ್ಕಾರ, ವಿವಿಧ ಸಂಸ್ಥೆಗಳಿಂದ ನೆರವುಸಿಗುತ್ತದೆ. ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ತರಬೇತಿ,ವಿಶೇಷವಾಗಿ ಗ್ರಾಮೀಣ ಯುವಕರಿಗೆ ಕೇಂದ್ರದಲ್ಲಿತೋಟಗಾರಿಕೆ, ಮಣ್ಣು, ನೀರು ವಿಶ್ಲೇಷಣೆ, ಸಸ್ಯ ಸಂರಕ್ಷಣೆ,ಹೈನುಗಾರಿಕೆ ಮತ್ತು ಮೌಲ್ಯವರ್ಧನೆಯ ತರಬೇತಿ,

ತಾಂತ್ರಿಕ ಮಾಹಿತಿಯನ್ನು ನೀಡಲಾಗುತ್ತಿದೆ ಎಂದುವಿವರಿಸಿದರು.ಧಾರವಾಡದ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕಡಾ.ಗುರು ಯಡಹಳ್ಳಿ ಅವರು ಎರೆಹುಳು, ಸಾವಯವಗೊಬ್ಬರ ತಯಾರಿಕೆ ಬಗ್ಗೆ ಉಪನ್ಯಾಸ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next