Advertisement

ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಕಾರ್ಮಿಕರ ಮುಷ್ಕರ

03:32 PM Mar 27, 2021 | Team Udayavani |

ತೇರದಾಳ: ಒಂದು ವರ್ಷದ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಕಳೆದ ಎಂಟುದಿನಗಳಿಂದ ಪುರಸಭೆ ನೀರು ಸರಬರಾಜುವಿಭಾಗದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದೆ.

Advertisement

ಪುರಸಭೆ ಅಧಿಕಾರಿಗಳು ಸ್ಪಂದಿಸದ ಕಾರಣ ಆಡಳಿತ ಪಕ್ಷದ ಬಿಜೆಪಿ ಸದಸ್ಯರು ಸಾರ್ವಜನಿಕರೊಂದಿಗೆ ಖಾಲಿ ಕೊಡಗಳಸಮೇತ ಪುರಸಭೆಗೆ ಶುಕ್ರವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಪುರಸಭೆ ನೀರು ಸರಬರಾಜು ಕಾರ್ಮಿಕರ 12 ತಿಂಗಳ ವೇತನ ನೀಡದಕಾರಣ ಕಾರ್ಮಿಕರು ಬೇಸತ್ತು ತಮ್ಮಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಆದರೆ,ಪುರಸಭೆ ಮುಖ್ಯಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ನದಿಯಲ್ಲಿನೀರಿದ್ದರೂ ಕೂಡ ಪಟ್ಟಣದಲ್ಲಿ ನೀರಿನಹಾಹಾಕಾರ ಉಂಟಾಗಿದೆ. ಇದರಿಂದಾಗಿಜನತೆ ತಮಗೆ ಹಿಡಿಶಾಪ ಹಾಕುತ್ತಿದ್ದಾರೆಎಂದು ಸದಸ್ಯರಾದ ವಿನಾಯಕ ಬಂಕಾಪುರ,ಲಕ್ಷ್ಮಣ ನಾಯಕ, ಸಚಿನ ಕೊಡತೆ, ಕಾಶಿನಾಥರಾಠೊಡ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಅಲ್ಲಪ್ಪ ಬಾಬಗೊಂಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಕೊಳವೆಬಾವಿಗಳಿವೆ. ಆದರೆ, ಗುಡ್ಡದ ಪ್ರದೇಶಆಗಿರುವ ದೇವರಾಜ ನಗರದಲ್ಲಿ ಕೊಳವೆ ಬಾವಿಗಳು ಇಲ್ಲ. ಪುರಸಭೆ ನೀರಿನ ಮೇಲೆಅವಲಂಬಿತರಾಗಿದ್ದಾರೆ. ಸಾರ್ವಜನಿಕರುಆಸ್ತಿ ತೆರಿಗೆ ನೀರಿನ ಕರ ಪಾವತಿಸಿದರೂಕೂಡ ಕಾರ್ಮಿಕರಿಗೆ ವೇತನ ನೀಡದೆಕಮಿಷನ್‌ ಸಲುವಾಗಿ ಇನ್ನುಳಿದ ಬೇರೆ ಬೇರೆ ಬಿಲ್‌ ಮಾತ್ರ ತೆಗೆಯುತ್ತಿದ್ದಾರೆಂದುಆರೋಪಿಸಿದರು.

ಆಸ್ತಿ ತೆರಿಗೆಯನ್ನು ಬ್ಯಾಂಕ್‌ ಗೆ ಸಂದಾಯ ಮಾಡಿ ರಜಿಸ್ಟರ್‌ನಲ್ಲಿ ದಾಖಲೆ ಮಾಡಲು ಸಾರ್ವಜನಿಕರು ಬಂದರೆ ಯಾರುಇರುವುದಿಲ್ಲ. ಮತ್ತು ಸಮರ್ಪಕವಾಗಿನಮೂದಿಸುವುದಿಲ್ಲ. ಇದರಿಂದಸಾರ್ವಜನಿಕರು ತೆರಿಗೆ ಪಾವತಿಸಿದರು ಸಹನೋಟಿಸ್‌ ಪಡೆಯುವಂತಾಗಿದೆ ಎಂದುಪುರಸಭೆ ಅವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಬರೀ ಸಬೂಬು ಹೇಳಿಕೊಂಡುಇರುವ ಸಿಬ್ಬಂದಿ ಕೆಲಸ ಮಾಡದೆಕಾಲಹರಣ ಮಾಡುತ್ತಿದ್ದಾರೆ. ಮುಖ್ಯಾಧಿಕಾರಿ ಸಮರ್ಪಕವಾಗಿ ಕಚೇರಿಗೆ ಬರುತ್ತಿಲ್ಲ. ಈ ಬಗ್ಗೆ ಶಾಸಕ ಸಿದ್ದು ಸವದಿ ತಾಕೀತು ಮಾಡಿದರೂ ಕೂಡ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಶಾಸಕರ ಮತ್ತು ಸದಸ್ಯರು ಹೆಸರು ಕೆಡಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾ ಧಿಕಾರಿಗಳು ತೇರದಾಳ ಪುರಸಭೆಗೆ ಭೇಟಿ ನೀಡಿ ಅಗತ್ಯ ಸಿಬ್ಬಂದಿ ಒದಗಿಸುವುದರ ಜತೆಗೆ ಈಗಿರುವ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸರಬರಾಜು ವಿಭಾಗದ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸನಿರ್ವಹಿಸುತ್ತಿದ್ದಾರೆ. ಮೊದಲಿನ ಗುತ್ತಿಗೆದಾರರ ಬಾಕಿ ವೇತನ ಪಾವತಿಸಲಾಗಿದ್ದು,ಸದ್ಯಕ್ಕೆ ಆರು ತಿಂಗಳ ವೇತನ ನೀಡಲುಕ್ರಮ ಕೈಗೊಳ್ಳಲಾಗುವುದು ಎಂದು ಲೆಕ್ಕಪರಿಶೋಧಕ ಜಯಗೊಂಡ ಮುಷ್ಕರ ನಿರತಕಾರ್ಮಿಕರಿಗೆ ಹಾಗೂ ಪ್ರತಿಭಟನೆನಿರತಸದಸ್ಯರಿಗೆ ಭರವಸೆ ನೀಡಿದರು. ಸದಾಶಿವಹೊಸಮನಿ, ಹನಮಂತ ರೋಡನ್ನವರ,ರಮೇಶ ಧರೆನ್ನವರ ಸೇರಿದಂತೆ ಅನೇಕ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next