Advertisement

ಖುಶ್ವಾ, ಯಾದವರಿಂದ ಪಾಯಸ ತಯಾರಿ ಸಾಧ್ಯ

10:12 AM Aug 27, 2018 | |

ಪಾಟ್ನಾ: ಮುಂದಿನ ಲೋಕಸಭೆ ಚುನಾವಣೆ ಒಳಗಾಗಿ ಬಿಹಾರದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಉಂಟಾಗುವ ನಿರೀಕ್ಷೆ ಇದ್ದು, ಎನ್‌ಡಿಎ ಮಿತ್ರಪಕ್ಷವಾದ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಮತ್ತೂಮ್ಮೆ ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.

Advertisement

ರವಿವಾರ ಆರ್‌ಎಲ್‌ಎಸ್‌ಪಿ ನಾಯಕ ಉಪೇಂದ್ರ ಖುಶ್ವಾಹಾ ಆಡಿರುವ ಮಾತುಗಳು ಇದನ್ನು ಪುಷ್ಟೀಕರಿಸಿವೆ. “ಖುಶ್ವಾಹಾಗಳಿಂದ ಪಡೆಯುವ ಅಕ್ಕಿಯಿಂದ, ಯಾದವ ಸಮುದಾಯ ನೀಡುವ ಹಾಲಿನಿಂದ ಉತ್ತಮ ಖೀರ್‌ ಸಿದ್ಧಪಡಿಸಬಹುದು’ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, “ಪ್ರೀತಿ, ವಾತ್ಸಲ್ಯದಿಂದ ತಯಾರಿಸುವ ಖೀರು ಯಾವತ್ತೂ ಹೆಚ್ಚು ರುಚಿಕರವಾಗಿಯೂ, ಶಕ್ತಿದಾಯಕವಾಗಿಯೂ,ಪೌಷ್ಟಿಕಾಂಶಯುಕ್ತವಾಗಿಯೂ ಇರುತ್ತದೆ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next