Advertisement

ಮೇ 11 ಉಚಿತ ಸಾಮೂಹಿಕ ಉಪನಯನಕ್ಕೆ ನೋಂದಾಣಿ ಅವಕಾಶ

03:15 PM Feb 28, 2023 | Team Udayavani |

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರು ಮತ್ತು ಕಡಿಯಾಳಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಕೆ ರಾಘವೇಂದ್ರ ಕಿಣಿ ಇವರ ನೇತೃತ್ವದಲ್ಲಿ ಮೇ 11ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಆವರಣದಲ್ಲಿ ಸಾಮೂಹಿಕ ಉಪನಯನ ನಡೆಯಲಿದೆ.

Advertisement

ಈ ಕಾರ್ಯಕ್ರಮದಲ್ಲಿ ಉಚಿತ ಉಪನಯನ ಸಂಸ್ಕಾರ ಬಯಸುವ ವಟುಗಳ  ಪೋಷಕರು 9008190489 ಈ ಸಂಖ್ಯೆಗೆ ಸಂಪರ್ಕಿಸುವುದು. ಈ ಬ್ರಹ್ಮೋಪದೇಶಕ್ಕೆ ತಗಲುವ ಎಲ್ಲಾ ವೆಚ್ಚವು ಸಂಪೂರ್ಣ ಉಚಿತವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಣಿಯವರ ದ್ವಿತೀಯ ಮಗನಾದ ರಚಿತ್ ಕಿಣಿಗೂ ಉಪನಯನ ನಡೆಯಲಿದ್ದು ಅರ್ಹ ಬಡ ವಟುಗಳಿಗೆ ಅವಕಾಶವಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next