Advertisement

15 ಲಕ್ಷ ರೂ. ವಂಚನೆಗೈದ ಉತ್ತರ ಪ್ರದೇಶ ಗುಮಾಸ್ತ ಅರೆಸ್ಟ್‌

03:51 PM Sep 22, 2017 | Team Udayavani |

ಅಮೇಠಿ, ಉತ್ತರ ಪ್ರದೇಶ : ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆದಿದ್ದಾಗ ಜಿಲ್ಲಾ ಚುನಾವಣಾ ಕಾರ್ಯಾಲಯಕ್ಕೆ ನಿಯೋಜಿಸಲ್ಪಟ್ಟಿದ್ದ  ಗುಮಾಸ್ತನೊಬ್ಬ 15 ಲಕ್ಷ ರೂ.ದುರಪಯೋಗಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ರಾಯ್‌ಬರೇಲಿ ನಿವಾಸಿಯಾಗಿರುವ ಆರೋಪಿ ವಾಸೀ ಅಹ್ಮದ್‌ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಗೌರೀಗಂಜ್‌ ಪೊಲೀಸ್‌ ಠಾಣೆಯ ಎಸ್‌ಎಚ್‌ಓ ಅನಿರುದ್ಧ ಸಿಂಗ್‌ ತಿಳಿಸಿದ್ದಾರೆ. 

ಚುನಾವಣೆಯ ವೇಳೆ ಜಿಲ್ಲಾ ಆಡಳಿತೆಯು ವಾಹನಗಳನ್ನು ಬಳಸಿಕೊಂಡ ಬಾಬ್ತು ಸೇರಿದಂತೆ ವಿವಿಧ ಚುನಾವಣಾ ಖರ್ಚು ವೆಚ್ಚಗಳನ್ನು ತೋರಿಸಿ ಆರೋಪಿ ಅಹ್ಮದ್‌ ಮೂರು ಬಾರಿ ಒಟ್ಟು 14,94,921 ರೂ.ಗಳನ್ನು ಅಕ್ರಮವಾಗಿ ಸರಕಾರದ ಬೊಕ್ಕಸದಿಂದ ಪಡೆದಿರುವುದು ಕಂಡು ಬಂದಿದೆ ಎಂದು ಎಸ್‌ಎಚ್‌ಓ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next