Advertisement

ಕೊನೆ ಕ್ಷಣದಲ್ಲಿ ಕಣಕ್ಕಿಳಿದ ಭುವನೇಶ್ವರ್‌

09:36 AM Jan 12, 2018 | Team Udayavani |

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ಸೋತರೂ ಪೇಸ್‌ ಬೌಲರ್‌ ಭುವನೇಶ್ವರ್‌ ಕುಮಾರ್‌ ಆಲ್‌ರೌಂಡ್‌ ಸಾಧನೆ ಮೂಲಕ ಮಿಂಚಿದ್ದನ್ನು ಮರೆಯುವಂತಿಲ್ಲ. ಆದರೆ ಅವರು ಆಡುವ ಬಳಗದಲ್ಲಿ ಸ್ಥಾನ ಸಂಪಾದಿಸಿದ್ದು ಕಡೇ ಗಳಿಗೆಯಲ್ಲಿ ಎಂಬ ಸಂಗತಿ ಈಗ ಬಯಲಾಗಿದೆ!

Advertisement

ಈ ಪಂದ್ಯಕ್ಕೆ ಅನುಭವಿ ವೇಗಿ ಇಶಾಂತ್‌ ಶರ್ಮ ಆಯ್ಕೆ ಆಗುವುದರಲ್ಲಿದ್ದರು. ಆದರೆ ಟೆಸ್ಟ್‌ ಪಂದ್ಯದ ದಿನವಾದ ಶುಕ್ರವಾರ ಬೆಳಗ್ಗೆ ಇಶಾಂತ್‌ಗೆ ತಲೆನೋವಿನ ಜತೆಗೆ ಜ್ವರವೂ ಕಾಡುವುದರಲ್ಲಿತ್ತು. ಹೀಗಾಗಿ ಅವರನ್ನು ಕೈಬಿಡುವುದು ಅನಿವಾರ್ಯವಾಯಿತು. 

ಕೊನೆಗೆ ನಾಯಕ  ಕೊಹ್ಲಿ ಸೂಚನೆಯಂತೆ ಈ ಅವಕಾಶ ಭುವನೇಶ್ವರ್‌ ಪಾಲಿಗೆ ಒದಗಿ ಬಂತು. ಇದನ್ನು ಭುವಿ ಭರ್ಜರಿಯಾಗಿಯೇ ಬಳಸಿಕೊಂಡರು. ಮೊದಲ ಮೂರೂ ಓವರ್‌ಗಳಲ್ಲಿ ಒಂದೊಂದು ವಿಕೆಟ್‌ ಹಾರಿಸಿ ಹರಿಣಗಳಿಗೆ ಭೀತಿಯೊಡಿಡªರು. ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಅವರೂ ಕೊನೆ ಗಳಿಗೆಯ ಈ ನಿರ್ಧಾರದಿಂದ ತಂಡಕ್ಕೆ ಅನುಕೂಲವಾದ ಬಗ್ಗೆ ಖುಷಿಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next