Advertisement

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

12:30 AM Jul 04, 2024 | Team Udayavani |

ಅಜೆಕಾರು: ಹಿರ್ಗಾನದ ಕ್ರಿಯೇಟಿವ್‌ ಕಾಲೇಜಿನ ಸಪ್ತಗಿರಿ ಕ್ಯಾಂಪಸ್‌ ಸಭಾಂಗಣದಲ್ಲಿ ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ ಕಾರ್ಯಕ್ರಮ ಜು. 1ರಂದು ನಡೆಯಿತು.

Advertisement

ಪುಸ್ತಕ ಬಿಡುಗಡೆಗೊಳಿಸಿ ಮಾತನಾ ಡಿದ ಹಿರಿಯ ಸಾಹಿತಿ ಗಿರೀಶ್‌ ರಾವ್‌ ಹತ್ವಾರ್‌, ಶಿಕ್ಷಣ ಎನ್ನುವುದು ಸಂಪಾದನೆಗೆ ಸಹಕಾರಿಯಾದರೆ, ಸಾಹಿತ್ಯವು ಪರಿಪೂರ್ಣ ಮನುಷ್ಯ ನನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.

ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ಪುಸ್ತಕ ಮನೆಯ ಪರಿಕಲ್ಪನೆ ಕ್ರಿಯೇಟಿವ್‌ ಶಿಕ್ಷಣದೊಂದಿಗೆ ಸಾಹಿತ್ಯ ಬೆಳವಣಿಗೆಗೆ ಪ್ರೇರಣೆಯಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.

ಕಾರ್ಕಳ ಕ.ಸಾ.ಪ. ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ, ಹೃದಯ ಶ್ರೀಮಂತಿಕೆ ಹೆಚ್ಚಿಸಲು ಸಾಹಿತ್ಯ ಕೃತಿಗಳು ಸಹಕಾರಿಯಾಗಿವೆ ಎಂದರು.

ಕಾಲೇಜಿನ ಸಂಸ್ಥಾಪಕ ಅಶ್ವಥ್‌ ಎಸ್‌. ಎಲ್‌. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ನರೇಂದ್ರ ಪೈ ಅವರ ಸಾವಿರದೊಂದು ಪುಸ್ತಕ, ಯಶೋದಾ ಮೋಹನ್‌ ಅವರ ಇಳಿ ಹಗಲಿನ ತೇವಗಳು, ಸುಧಾ ನಾಗೇಶ್‌ ಅವರ ಹೊಂಬೆಳಕು, ವಾಣಿರಾಜ್‌ ಅವರ ಸವಿನೆನಪುಗಳ ಹಂದರ, ಡಾ| ಸುಬ್ರಹ್ಮಣ್ಯ ಸಿ. ಕುಂದೂರು ಅವರ ಜೀವನಯಾನ, ಅನುಬೆಳ್ಳೆ ಅವರ ನಗುವ ನಯನ ಮಧುರ ಮೌನ, ರಾಮಕೃಷ್ಣ ಹೆಗಡೆ ಅವರ ಒಲವಧಾರೆ, ಲಕ್ಷ್ಮಣ ಬಜಿಲರ ನಿರ್ವಾಣ, ಅಶ್ವತ್ಥ ಎಸ್‌. ಎಲ್‌.ರ ಅರಿವಿನ ದಾರಿ, ರಾಜೇಂದ್ರ ಭಟ್‌ ಅವರ ರಾಜಪಥ, ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರ ಸಾರ್ಥಕ ಜೀವನಕ್ಕೆ ಕಗ್ಗೊಪದೇಶ, ಲಲಿತಾ ಮುದ್ರಾಡಿಯವರ ಅರ್ಥವಾಗ ದವರು, ದಿಗಂತ್‌ ಬಿಂಬೈಲ್‌ ಅವರ ಕೊಂದ್‌ ಪಾಪ ತಿಂದ್‌ ಪರಿಹಾರ, ಡಾ| ರಾಜಶೇಖರ್‌ಹಳೆಮನೆ ಅವರ ಒಡಲುಗೊಂಡವರು, ಮಹೇಶ್‌ ಪುತ್ತೂರು ಅವರ ವರ್ಣ ಪುಸ್ತಕಗಳು ಬಿಡುಗಡೆಗೊಂಡವು.
ಕಾಲೇಜು ಸಂಸ್ಥಾಪಕ ವಿ| ಗಣಪತಿ ಭಟ್‌, ಡಾ| ಗಣನಾಥ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ. ಕೆ., ವಿಮಲ್‌ ರಾಜ್‌ ಜಿ., ಗಣಪತಿ ಭಟ್‌ ಕೆ. ಎಸ್‌. ಉಪಸ್ಥಿತರಿದ್ದರು. ಲೋಹಿತ್‌ ಎಸ್‌. ಕೆ. ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next