Advertisement

ಇಂಜಿನಿಯರ್‌ಗಳ ಅನಗತ್ಯ  ವರ್ಗಾವಣೆ ಆಗಿಲ್ಲ: ರೇವಣ್ಣ

06:45 AM Oct 02, 2018 | Team Udayavani |

ಹಾಸನ: ಲೋಕೋಪಯೋಗಿ ಇಲಾಖೆಯಲ್ಲಿ ನಿವೃತ್ತಿ ಮತ್ತು ವಿವಿಧ ಕಾರಣಗಳಿಂದ ತೆರವಾಗಿದ್ದ ಇಂಜಿನಿಯರುಗಳ ಹುದ್ದೆಗಳನ್ನಷ್ಟೇ ವರ್ಗಾವಣೆ ಮೂಲಕ ತುಂಬಲಾಗಿದೆ. ಅನಗತ್ಯ ವರ್ಗಾವಣೆಯಾಗಿಲ್ಲ. ವರ್ಗಾವಣೆಯಲ್ಲಿ ತಾವು ಹಸ್ತಕ್ಷೇಪವನ್ನೂ  ಮಾಡಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸ್ಪಷ್ಟಪಡಿಸಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನಿವೃತ್ತಿಯಿಂದ ತೆರವಾದ ಹುದ್ದೆಗಳಿಗಳಿಗೂ ಇಂಜಿನಿಯರುಗಳನ್ನು ತುಂಬದಿದ್ದರೆ ಇಲಾಖೆಯಲ್ಲಿ ಕೆಲಸ ಮಾಡುವುದು ಹೇಗೆ ಎಂಬುದನ್ನು ಆರೋಪ ಮಾಡುತ್ತಿರುವವರು ತಿಳಿಸಲಿ ಎಂದು ತಿರುಗೇಟು ನೀಡಿದರು.

ಲೋಕೋಪಯೋಗಿ ಇಲಾಖೆಯಲ್ಲಿ 700ಕ್ಕೂ ಹೆಚ್ಚು ಅಧಿಕಾರಿಗಳ ವರ್ಗವಾಗಿದೆ ಎಂಬ ಆರೋಪ ಮಾಡುತ್ತಿರುವವರು ವಾಸ್ತವಾಂಶ ಏನಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಮಾತನಾಡಲಿ. ದಾಖಲೆ ನೀಡಲು ನಾನೂ ಸಿದ್ದನಿದ್ದೇನೆ. ವಿವಿಧ ಇಲಾಖೆಗಳಲ್ಲೂ ಇಂಜಿನಿಯರುಗಳು ಹಾಗೂ ಅಧಿಕಾರಿಗಳ ವರ್ಗಾವಣೆಯಾಗಿದೆ. ಆಡಳಿತದಲ್ಲಿ ವರ್ಗಾವಣೆ ಸಹಜ. ಇದು ಗೊತ್ತಿದ್ದರೂ ಬಿಜೆಪಿಯವರು ಮಾಡುವ ಆರೋಪಗಳಿಗೆಲ್ಲಾ ಪ್ರತಿಕ್ರಿಯೆ ನೀಡಲಾಗದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next