Advertisement

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

01:00 AM Mar 29, 2024 | Team Udayavani |

ಹೊಸದಿಲ್ಲಿ: ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡಲಾಗುತ್ತಿದೆ ಎಂಬ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

ನೀತಿ ಆಯೋಗದ ಸದಸ್ಯ ಅರವಿಂದ ವೀರಮಣಿ ಅವರು ರಾಜನ್‌ ಹೇಳಿಕೆಯನ್ನು ಟೀಕಿಸಿದ್ದು 1990ರಲ್ಲಿ ಉಂಟಾಗಿದ್ದ ಬ್ಯಾಲೆನ್ಸ್‌ ಆಫ್ ಪೇಮೆಂಟ್‌ ಬಿಕ್ಕಟ್ಟಿನ ಅವಧಿಯಲ್ಲೂ ಇದೇ ಮಾತು ಕೇಳಿ ಬಂದಿತ್ತು. ವಿಶ್ವಬ್ಯಾಂಕ್‌, ಐಎಂಎಫ್ ಮತ್ತು ಇತರ ಜಾಗತಿಕ ಹಣ ಕಾಸು ಸಂಸ್ಥೆಗಳ ಹಣಕಾಸು ತಜ್ಞರಂತೆ ರಘುರಾಂ ಮಾತನಾಡುವುದು ವಿಷಾದ ನೀಯ. ಅವರೊಬ್ಬರು ಪ್ಯಾರಾ ಚೂಟ್‌ ಎಕನಾಮಿಸ್ಟ್‌ ಎಂದು ಟ್ವೀಟ್‌ ಮಾಡಿದ್ದಾರೆ. 50 ವರ್ಷ ಕಾಲ ಭಾರತದ ಅರ್ಥ ವ್ಯವಸ್ಥೆ ಬಗ್ಗೆ ಕೆಲಸ ಮಾಡಿರುವ ರಘುರಾಮ್‌ ರಾಜನ್‌ ಇಂಥ ಹೇಳಿಕೆ ನೀಡಿದ್ದು ಸರಿಯಲ್ಲ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ಮಣಿಪಾಲ ಗ್ಲೋಬಲ್‌ ಎಜುಕೇಶನ್‌ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್‌ ಪೈ “ಶಾಲೆಯಿಂದ ಹೊರಗುಳಿವ ಮಕ್ಕಳ ಪ್ರಮಾಣ ಇಳಿಕೆ ಯಾಗಿದೆ. ಕಾಲೇಜುಗಳಲ್ಲಿ ನೋಂದಣಿ ಪ್ರಮಾಣವೂ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ರಘುರಾಮ್‌ ರಾಜನ್‌ ವಿನಾಕಾರಣ ಟೀಕಿಸುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೋಲಿಕೆ ಮಾಡಿದರೆ, ಕೇಂದ್ರ ಸರಕಾರದ ವತಿಯಿಂದ ಮಾಡುವ ವೆಚ್ಚ ಏರಿಕೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next