Advertisement

“ವ್ಯಸನಿಗಳಿಗೆ ಮಗಳನ್ನು ನೀಡದಿರಿ’:ಸಚಿವ ಕೌಶಲ್‌ ಕುಮಾರ್‌

12:43 AM Dec 26, 2022 | Team Udayavani |

ಸುಲ್ತಾನಪುರ: “ಮದ್ಯವ್ಯಸನಿ ಅಧಿಕಾರಿಗೆ ನಿಮ್ಮ ಮಗಳು ಅಥವಾ ಸಹೋದರಿ ಯನ್ನು ನೀಡುವ ಬದಲು ಒಬ್ಬ ಆಟೋ ಚಾಲಕ ಅಥವಾ ಕಾರ್ಮಿಕನಿಗೆ ಕೊಟ್ಟು ಮದುವೆ ಮಾಡಿ,’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ ಸಚಿವ ಕೌಶಲ್‌ ಕುಮಾರ್‌ ಸಲಹೆ ನೀಡಿದ್ದಾರೆ.

Advertisement

ಉತ್ತರ ಪ್ರದೇಶದ ಲಂಬುವಾದಲ್ಲಿ ಮದ್ಯ ವ್ಯಸನ ಮುಕ್ತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕುಡುಕರ ಆಯಸ್ಸು ತೀರ ಕಡಿಮೆ. ಇದಕ್ಕೆ ನನ್ನ ಮಗನೇ ಸಾಕ್ಷಿ. ನಾನು ಸಂಸದನಾದರೂ, ನನ್ನ ಪತ್ನಿ ಶಾಸಕಿ ಆದರೂ ಮಗ ಆಕಾಶ್‌ ಕಿಶೋರ್‌ನನ್ನು ಉಳಿಸಿಕೊಳ್ಳಲು ಆಗಲಿಲ್ಲ,’ ಎಂದರು. “ನನ್ನ ಮಗ ಕುಡಿತದ ಚಟಕ್ಕೆ ಬಿದ್ದಿದ್ದ. ಅವನನ್ನು ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಲಾಯಿತು. ಅನಂತರ ಸರಿಹೋಗಬಹುದು ಎಂದು ಭಾವಿಸಿ, ಯುವತಿಯೊಂದಿಗೆ ಮದುವೆ ಮಾಡಿಸಿದೆವು. ಆದರೆ ಆತ ಮದ್ಯ ಸೇವಿಸುವುದು ಮುಂದುವರಿಸಿದ. ಅನಂತರ ಎರಡು ವರ್ಷದ ಮಗ ಮತ್ತು ಪತ್ನಿಯನ್ನು ಅನಾಥನನ್ನಾಗಿ ಆತ ನಿಧನ ಹೊಂದಿದ’ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next