Advertisement

ಮಹಾ ಸರ್ಕಾರಕ್ಕೆ ಹೊಸ ಹೆಸರಿಟ್ಟ ಪ್ರಕಾಶ್‌ ಜಾವಡೇಕರ್‌!

07:39 PM Nov 28, 2021 | Team Udayavani |

ಮುಂಬೈ: ಮಹಾರಾಷ್ಟ್ರ ಸರ್ಕಾರವು ಎರಡು ವರ್ಷಗಳ ಆಡಳಿತ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮಹಾ ವಿಕಾಸ್‌ ಅಘಾಡಿ(ಎಂವಿಎ) ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಬಿಜೆಪಿ ಅದರ ಕಾಲೆಳೆದಿದೆ.

Advertisement

ಇದು “ಮಹಾ ವಿಶ್ವಾಸಘಾತಿ ಅಘಾಡಿ ಸರ್ಕಾರ’ ಎಂದು ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ದೂರಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರಕಾಶ್‌ ಜಾವಡೇಕರ್‌ ಅವರು, “”ಇದು ಅತ್ಯಂತ ಭ್ರಷ್ಟ, ಅವಕಾಶವಾದಿ, ಜನವಿರೋಧಿ ಮತ್ತು ನಿರುಪಯುಕ್ತ ಸರ್ಕಾರ. ಈ ಸಿಎಂ ಒಬ್ಬ ಆಕಸ್ಮಿಕ ಸಿಎಂ. ಈ ಸರ್ಕಾರ 2 ವರ್ಷ ಪೂರ್ಣಗೊಳಿಸಿರುವುದಕ್ಕೆ ಹೊಗಳುವಂಥದ್ದು ಏನೂ ಇಲ್ಲ. ಜನರು ಸರ್ಕಾರವನ್ನು ಮಹಾ ವಸೂಲಿಯ ಅಘಾಡಿ ಸರ್ಕಾರ ಎಂದು ಕರೆಯುತ್ತಿದ್ದಾರೆ.

ಇದನ್ನೂ ಓದಿ:ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

ನಾನು ಇದನ್ನು “ಮಹಾ ವಿಶ್ವಾಸಘಾತಿ ಅಘಾಡಿ ಸರ್ಕಾರ’ ಎಂದು ಕರೆಯುತ್ತೇನೆ” ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next