Advertisement

ಕೇಂದ್ರ ಬಜೆಟ್‌ ಪ್ರತಿ ದಹಿಸಿ ಪ್ರತಿಭಟನೆ

01:02 PM Feb 06, 2022 | Team Udayavani |

ರಾಯಚೂರು: ಕೇಂದ್ರ ಸರ್ಕಾರದ ವಿತ್ತ ಸಚಿವರು ಮಂಡಿಸಿದ ಬಜೆಟ್‌ ಕಾರ್ಮಿಕ, ಬಡಜನರ ವಿರೋಧಿಯಾಗಿದೆ ಎಂದು ಆರೋಪಿಸಿ ಸಿಐಟಿಯು ಸಂಘಟನೆ ಹಾಗೂ ಸಿಪಿಐಎಂ ಪಕ್ಷದ ಕಾರ್ಯಕರ್ತರು ಶನಿವಾರ ಡಿಸಿ ಕಚೇರಿ ಎದುರು ಬಜೆಟ್‌ ಪ್ರತಿಯನ್ನು ದಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

Advertisement

2022-23ರ ಬಜೆಟ್‌ ಯಾವುದೇ ಸತ್ವವಿಲ್ಲದ, ಖಾಲಿ ಡಬ್ಬಿಯಂತಿದೆ. ಒಂದು ದಿನದ ಹಿಂದೆ ಮಂಡಿಸಿದ ಆರ್ಥಿಕ ಸಮೀಕ್ಷೆಯ ಮುಂದುವರಿದ ಭಾಗದಂತೆ ಕಂಡು ಬಂದಿದೆ. ಜನರ ಜೀವನೋಪಾಯದ ಗಳಿಕೆಯ ನಷ್ಟ, ಬಡತನ, ನಿರುದ್ಯೋಗ ಸೇರಿದಂತೆ ಯಾವುದೇ ಪ್ರಮುಖ ವಿಷಯಗಳಿಗೆ ಬಜೆಟ್‌ನಲ್ಲಿ ಉತ್ತರವೇ ಸಿಕ್ಕಿಲ್ಲ. ಆದರೆ, ಕಾರ್ಪೊರೇಟ್‌ ವರ್ಗಗಳಿಂದ ಏಕಕಾಲದಲ್ಲಿ ಬೃಹತ್‌ ಸಂಪತ್ತನ್ನು ಗಳಿಸುವುದರೊಂದಿಗೆ ಬಹುಪಾಲು ಜನರನ್ನು ಬಳಲುವಂತೆ ಬಜೆಟ್‌ ಮಾಡಲಿದೆ ಎಂದು ಟೀಕಿಸಿದರು.

2022-23ರಲ್ಲಿ ಬಜೆಟ್‌ ಮಾಡಲಾದ 3.19 ಲಕ್ಷ ಕೋಟಿ ರೂ. ಆದಾಯ ವೆಚ್ಚವು ಪ್ರಧಾನ ಮಂತ್ರಿಯವರ ಹೆಸರಿನ ಕಲ್ಯಾಣ ಆತಿಥ್ಯ ಯೋಜನೆಗಳೆಂದು ಕರೆಯಲ್ಪಡುವ ಕಾರ್ಯಕ್ರಮಗಳಿಗೂ ಶೇ.1ಕ್ಕಿಂತ ಕಡಿಮೆ ಹೆಚ್ಚಳವನ್ನು ನೀಡಿದೆ. ಆದರೆ, ಹಣಕಾಸು ಸಚಿವರ ಹೆಮ್ಮೆ ಪಡುವಂತೆ ಜಿಎಸ್‌ಟಿ ಸಂಗ್ರಹಣೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಬಜೆಟ್‌ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್‌.ಎಸ್‌. ಬಸವರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ಶರಣಬಸವ, ಅಧ್ಯಕ್ಷ ವರಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪದಾಧಿಕಾರಿಗಳಾದ ಅಶೋಕ, ವೀರೇಶಸ್ವಾಮಿ, ಹನುಮಂತ ಗೋಳಿ, ವೆಂಕೋಬ, ಆಂಜನೇಯ, ಪಾರ್ವತಿ, ಸುಲೋಚನಾ, ಇಂದಿರಾ, ಶರಣಮ್ಮ, ರೇಣುಕಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next