Advertisement

ಬಜೆಟ್‌: ಬಡವರ ವಿರೋಧಿ, ಸಿರಿವಂತರ ಪರ: ಮಾಯಾವತಿ ಟೀಕೆ

04:00 PM Feb 01, 2018 | udayavani editorial |

ಲಕ್ನೋ : ಇಂದು ಮಂಡಿಸಲ್ಪಟ್ಟ ಕೇಂದ್ರ ಬಜೆಟ್‌ ಬಡವರ ವಿರೋಧಿ ಮತ್ತು ಬಂಡವಾಳಶಾಹಿಗಳ ಪರವಾಗಿದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಟೀಕಿಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಸರಕಾರದ ಹಿಂದಿನ ಬಜೆಟ್‌ನ ಹಾಗೆ ಈ ಬಾರಿಯ ಬಜೆಟ್‌ ಕೂಡ ಬಡವರ ವಿರೋಧಿಯಾಗಿದ್ದು  ಸಿರಿವಂತರ ಪರವಾಗಿದೆ ಎಂದು ಮಾಯಾವತಿ ಪ್ರತಿಕ್ರಿಯಿಸಿದರು. 

2014ರ ಲೋಕಸಭಾ ಚುನಾವಣೆಗೆ ಮುನ್ನ ಮೋದಿ ಅವರು ಕೊಟ್ಟಿದ್ದ ಅಚ್ಛೇ ದಿನಗಳ ಭರವಸೆ ಏನಾಯ್ತು  ? ಪ್ರಧಾನಿ ಮೋದಿ ಅವರು ದೇಶದ ಜನರ ದಾರಿ ತಪ್ಪಿಸುವ ಭಾಷಣಗಳನ್ನು ಮಾಡುತ್ತಾರೆ ಮತ್ತು ದೊಡ್ಡ ದೊಡ್ಡ ಸಾಧನೆಗಳ ಮಾತನ್ನು ಆಡುತ್ತಾರೆ ಎಂದು ಮಾಯಾವತಿ ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next