Advertisement

ಅಸಮಾಧಾನ ತಾತ್ಕಾಲಿಕ: ಖರ್ಗೆ

06:10 AM Jun 09, 2018 | Team Udayavani |

ಕಲಬುರಗಿ: ಸಚಿವ ಸ್ಥಾನ ಸಿಗದೇ ಇರುವ ಸಂಬಂಧ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇರುವುದು ನಿಜ ಎಂದು
ಕಾಂಗ್ರೆಸ್‌ ಸಂಸದೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ರೀತಿಯ ಅಸಮಾಧಾನ ಶೀಘ್ರವೇ ಬಗೆಹರಿಯುತ್ತದೆ. ಇದಕ್ಕೆ ಯಾರೂ ತುಪ್ಪ ಸುರಿಯುವುದು ಬೇಡ. ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತ ಉಂಟಾಗಿರುವುದು ಕೇವಲ ತಾತ್ಕಾಲಿಕ. ಪಕ್ಷದ ವರಿಷ್ಠರು ಇದನ್ನು ಶಮನಗೊಳಿಸಲಿದ್ದಾರೆ. ಯಾವುದೇ ಸರ್ಕಾರ ರಚಿಸಿದ ಮೇಲೆ ಸಚಿವ ಸಂಪುಟದ ಕುರಿತು ಅಸಮಾಧಾನ, ಭಿನ್ನಮತ ಇದ್ದೇ ಇರುತ್ತದೆ. ಡಾ| ಜಿ. ಪರಮೇಶ್ವರ್‌ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ. ಅವರೊಂದು ತೀರ, ಇವರೊಂದು ತೀರಾ ಎಂಬುದು ಸುಳ್ಳು. ಇಬ್ಬರೂ ನಾಯಕರಲ್ಲಿ ಒಗ್ಗಟ್ಟಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next