Advertisement

ಈ ವರ್ಷ ಅತಿದೊಡ್ಡ ಮಾನವೀಯ ಬಿಕ್ಕಟ್ಟು!

03:45 AM Mar 13, 2017 | Team Udayavani |

ಲಂಡನ್‌: 2017ರಲ್ಲಿ ಅಪೌಷ್ಟಿಕತೆಯಿಂದಲೇ 14 ಲಕ್ಷ ಮಕ್ಕಳು ಸಾವನ್ನಪ್ಪುತ್ತಾರೆ. ಇದು ಈ ವರ್ಷದ ಅತಿದೊಡ್ಡ ಮಾನವೀಯ ಬಿಕ್ಕಟ್ಟು! 

Advertisement

ಹೀಗೊಂದು ಕಹಿ ಎಚ್ಚರಿಕೆಯನ್ನು ವಿಶ್ವಸಂಸ್ಥೆಯ ಘಟಕ ಯೂನಿಸೆಫ್ ರವಾನಿಸಿದೆ. ಇದರ ಬೆನ್ನಲ್ಲೇ 1945ರಿಂದ ಈಚೆಗೆ ಒಟ್ಟಾರೆ ನಾಲ್ಕು ದೇಶಗಳಲ್ಲಿ 2 ಕೋಟಿ ಮಂದಿ ಹಸಿವು ಮತ್ತು ಕ್ಷಾಮದಿಂದ ನರಳುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ಘಟಕದ ಮುಖ್ಯಸ್ಥ ಸ್ಟೀಫ‌ನ್‌ ಒಬ್ರಿಯನ್‌ ಹೇಳಿದ್ದಾರೆ. ಯೆಮೆನ್‌, ದಕ್ಷಿಣ ಸುಡಾನ್‌, ಸೋಮಾಲಿಯಾ ಮತ್ತು ಈಶಾನ್ಯ ನೈಜೀರಿಯಾದ ಬಡವರ ಜೀವ ಉಳಿಸಲು ಜಗತ್ತು ಮುಂದಾಗಬೇಕು. ಇದಕ್ಕೆ 29 ಸಾವಿರ ಕೋಟಿ ರೂ. ಹಣದ ಅಗತ್ಯವಿದೆ. ಈ ಪ್ರದೇಶದ 5 ವರ್ಷದೊಳಗಿನ ಶೇ.30 ಮಕ್ಕಳು ಅಪೌಷ್ಟಿಕತೆಯಿಂದಲೇ ಸಾವಿನ ದಾರಿ ಹಿಡಿದಿದ್ದಾರೆ. ಪ್ರತಿ 10 ಸಾವಿರ ಮಂದಿಗೆ 3 ಮಕ್ಕಳು ಸಾವನ್ನಪ್ಪುತಿದ್ದಾರೆ ಎಂದು ಆತಂಕದ ವರದಿಯನ್ನು ವಿಶ್ವಸಂಸ್ಥೆಯ ಮುಂದಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next