Advertisement

MLC ಯಾಗಿ ಉಮಾಶ್ರೀ: ಮಹಾಲಿಂಗಪುರದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ

11:01 PM Aug 19, 2023 | Team Udayavani |

ಮಹಾಲಿಂಗಪುರ: ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ, ಮಾಜಿ ಸಚಿವೆ ಉಮಾಶ್ರೀ, ನೇಕಾರ ನಾಯಕಿ ಅವರು ಶನಿವಾರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರಿಂದ ಅವರ ಅಭಿಮಾನಿಗಳು ಶನಿವಾರ ರಾತ್ರಿ ಮಹಾಲಿಂಗಪುರ ಪಟ್ಟಣದ ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು.

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೇರದಾಳ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಮಾಶ್ರೀಯವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಅವರ ಅಭಿಮಾನಿಗಳು ತೀವೃ ನಿರಾಶೆಗೊಂಡಿದ್ದರು. ಈಗ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ಉಮಾಶ್ರೀಯವರು ವಿಧಾನ ಪರಿಷತ್ ಪ್ರವೇಶಿಸುತ್ತಿರುವದರಿಂದ ಅವರ ಅಭಿಮಾನಿಗಳ ಹರ್ಷವು ಮುಗಿಲು ಮುಟ್ಟಿದೆ.

ಕಾಂಗ್ರೆಸ್ ಮುಖಂಡರಾದ ಮಲ್ಲಪ್ಪ ಸಿಂಗಡಿ, ಈಶ್ವರ ಚಮಕೇರಿ, ಪ್ರಕಾಶ ಮಮದಾಪೂರ, ಬಲವಂತ ಪಾಟೀಲ, ಪಿಯೂಷ್ ಓಸ್ವಾಲ್, ವಿಠ್ಠಲ ಹೊಸಮನಿ, ಅರವಿಂದ ಮಾಲಬಸರಿ, ಅರ್ಜುನ ದೊಡಮನಿ, ಲಕ್ಷ್ಮಣ ಮಾಂಗ, ಜ್ಯೋತೆಪ್ಪ ಕಪರಟ್ಟಿ, ಅನೀಲ ದೇಸಾಯಿ, ಹೊಳೆಪ್ಪ ಬಾಡಗಿ, ಜಗದೀಶ ಒಂಟಗೋಡಿ, ಪ್ರಭು ತಂಬೂರಿ, ನಾರಾಯಣ ಜೋಶಿ, ಯಮನಪ್ಪ ಸೇರಿದಂತೆ ಹಲವರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next