Advertisement

ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಕಾರು ಅಪಘಾತವಾಗಿ ಮದುವೆ ನಿಶ್ಚಯವಾಗಿದ್ದ ಯುವಕ ಸಾವು

04:10 PM Jul 11, 2020 | keerthan |

ಉಳ್ಳಾಲ: ಇಲ್ಲಿನ ನೇತ್ರಾವತಿ ನದಿ ಸೇತುವೆಯ ಮೇಲೆ ಸ್ಕೂಟರ್ ಸವಾರನೊಬ್ಬನಿಗೆ ಕಾರು ಢಿಕ್ಕಿ ಹೊಡೆದು, ರಸ್ತೆಗುರುಳಿದವನ ಮೇಲೆ ಲಾರಿ ಹರಿದ ಕಾರಣ ಸ್ಕೂಟರ್ ಸವಾರ ಸಾವನ್ನಪ್ಪಿದ ಶನಿವಾರ ಮಧ್ಯಾಹ್ನ ನಡೆದಿದೆ.

Advertisement

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಉಳ್ಳಾಲ ನಿವಾಸಿ ಸುಬೈದ್ (28) ಎಂದು ಗುರುತಿಸಲಾಗಿದೆ. ಈತನಿಗೆ ಇದೇ ತಿಂಗಳ 23ರಂದು ಮದುವೆ ನಿಶ್ಚಯಿಸಲಾಗಿತ್ತು. ಸಹಸವಾರ ಚೆಂಬುಗುಡ್ಡೆ ಮಹಮ್ಮದ್ ಶಾಕೀರ್ (18)  ಗಂಭೀರವಾಗಿ ಗಾಯಗೊಂಡಿದ್ದಾರೆ.

ಸುಬೈದ್ ತನ್ನ ಸ್ಕೂಟರ್ ನಲ್ಲಿ ತೊಕ್ಕಟ್ಟು ಕಡೆಯಿಂದ ಬರುತ್ತಿದ್ದ. ನೇತ್ರಾವತಿ ಸೇತುವೆ ಮೇಲೆ ಹಿಂದಿನಿಂದ ಬಂದ ಕಾರು ಸುಬೈದ್ ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಢಿಕ್ಕಿಯ ರಭಸಕ್ಕೆ ಸುಬೈದ್ ರಸ್ತೆಗೆ ಉರುಳಿ ಬಿದ್ದಿದ್ದು, ಆಗ ಹಿಂದಿನಿಂದ ಬಂದ ಲಾರಿಯೊಂದು ಆತನ ಮೇಲಿನಿಂದ ಹೋಗಿದೆ. ಪರಿಣಾಮ ಸುಬೈದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

Advertisement

ಸ್ಕೂಟರ್  ಗೆ ಢಿಕ್ಕಿಯಾಗಿ ಪರಾರಿಯಾಗಿದ್ದ ಕಾರನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ತಡೆದು ವಶಕ್ಕೆ ಪಡೆದಿದ್ದಾರೆ. ಚಾಲಕನ ವಿರುದ್ಧ ಹಿಟ್ ಆಂಡ್ ರನ್ ಕೇಸು ದಾಖಲಿಸಿದ್ದಾರೆ. ಕಾರು ಸವಾರ ಕೃಷ್ಣ ಹಾಗೂ ಲಾರಿ ಸವಾರ ಕಾರ್ಕಳದ ಸುರೇಂದ್ರ  ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ನಾಗುರಿ ಸಂಚಾರಿ ಠಾಣಾ ಪೊಲೀಸರಿಂದ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next