Advertisement

Ullal ವಿದ್ಯುತ್‌ ಕಂಬ ಏರಿದ ಹೆಬ್ಬಾವು; ತಂತಿ ಸ್ಪರ್ಶಿಸಿ ಸಾವು

09:38 PM Jul 16, 2024 | Team Udayavani |

ಉಳ್ಳಾಲ: ವಿದ್ಯುತ್‌ ಕಂಬ ಏರಿದ ಬೃಹತ್‌ ಗಾತ್ರದ ಹೆಬ್ಬಾವು ವಿದ್ಯುತ್‌ ಶಾಕ್‌ ತಗಲಿ ಸಾವನ್ನಪ್ಪಿರುವ ಘಟನೆ ಮುಕ್ಕಚ್ಚೇರಿ ಹೈದರಾಲಿ ರೋಡ್‌ ಎಂಬಲ್ಲಿ ನಡೆದಿದ್ದು, ಸ್ಥಳೀಯರು ಹಾಗೂ ಮೆಸ್ಕಾಂ ಸಿಬ್ಬಂದಿ ಕಳೇಬರವನ್ನು ಕಂಬದಿಂದ ಕೆಳಗಿಳಿಸಿದ್ದಾರೆ.

Advertisement

ಹೆಬ್ಬಾವು ವಿದ್ಯುತ್‌ ತಂತಿ ಸಮೀಪವೇ ಇರುವ ತೆಂಗಿನ ಮರದ ಮೂಲಕ ಮರವನ್ನೇರಿರುವ ಶಂಕೆ ಇದೆ. ಅಲ್ಲಿಂದ ವಿದ್ಯುತ್‌ ಕಂಬದ ಮೇಲೆ ದಾಟುವಾಗ ವಿದ್ಯುತ್‌ ಶಾಕ್‌ ತಗಲಿ ಅಲ್ಲೇ ಮೃತಪಟ್ಟಿರುವ ಶಂಕೆಯಿದೆ.

ರಾತ್ರಿ ವೇಳೆ ಹೆಬ್ಬಾವು ಚಲಿಸಿದ್ದು ಮೃತಪಟ್ಟಿದ್ದು, ಸ್ಥಳೀಯರು ಬೆಳಿಗ್ಗೆ ಎದ್ದು ಗಮನಿಸುವಾಗ ಹೆಬ್ಬಾವು ಸಾವನ್ನಪ್ಪಿತ್ತು. ತಕ್ಷಣ ಸ್ಥಳೀಯರು ಸ್ಥಳೀಯ ಉಳ್ಳಾಲ ನಗರಸಭೆ ಸದಸ್ಯ ಖಲೀಲ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಮೆಸ್ಕಾಂ ಗಮನಕ್ಕೆ ತಂದಿದ್ದಾರೆ.

ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಿದ್ಯುತ್‌ ಸಂಚಾರ ಕಡಿತಗೊಳಿಸಿ ಹೆಬ್ಬಾವು ಕಳೇಬರ ಮೇಲಿನಿಂದ ಕೆಳಗಿಳಿಸಿ, ಮಣ್ಣು ಮಾಡಿದ್ದಾರೆ. ಈ ಸಂದರ್ಭ ಮೆಸ್ಕಾಂ ಸಿಬ್ಬಂದಿ ಖಲಂದರ್‌, ಗುತ್ತಿಗೆದಾರ ಹನೀಫ್‌, ರಾಯಲ್‌ ಫೌಂಡೇಷನ್‌ನ ತೌಸೀಫ್‌ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next