Advertisement

ಉತ್ತರಾಖಂಡ ಸರಕಾರದಿಂದ ರಿಸ್ಪಾನಾ, ಬಿಂದಾಲ್‌ ನದಿ ಪುನಶ್ಚೇತನ

10:20 AM Jan 10, 2019 | Team Udayavani |

ಡೆಹರಾಡೂನ್‌ : ಗುಜರಾತ್‌ನ ಸಾಬರ್‌ಮತಿ ನದಿಯ ಮಾದರಿಯಲ್ಲೇ ಉತ್ತರಾಖಂಡ ಸರಕಾರ ತನ್ನ ರಾಜ್ಯದಲ್ಲಿನ ರಿಸ್ಪಾನಾ ಮತ್ತು ಬಿಂದಾಲ್‌ ನದಿಯನ್ನು ಪುನಶ್ಚೇತನಗೊಳಿಸಲಿದೆ ಎಂದು ಅದರ ಅಧಿಕೃತ ಪ್ರಕಟನೆ ತಿಳಿಸಿದೆ.

Advertisement

ಈ ಸಂಬಂಧದ ತಿಳಿವಳಿಕೆ ಒಪ್ಪಂದಕ್ಕೆ ಸಾಬರ್‌ಮತಿ ರಿವರ್‌ ಫ್ರಂಟ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಲಿಮಿಟೆಡ್‌ (ಎಸ್‌ಆರ್‌ಎಫ್ಡಿಸಿಎಲ್‌) ಮತ್ತು ಮುಸೋರಿ ಡೆಹರಾಡೂನ್‌ ಡೆವಲಪ್‌ಮೆಂಟ್‌ ಅಥಾರಿಟಿ (ಎಂಡಿಡಿಎ) ಸಹಿ ಹಾಕಿವೆ. 

ಎಸ್‌ಆರ್‌ಎಫ್ಡಿಸಿಎಲ್‌ ಕಾರ್ಯನಿವಾರ್ಹಕ ನಿರ್ದೇಶಕ ಆರ್‌ ಕೆ ಮೆಹ್ತಾ ಮತ್ತು ಎಂಡಿಡಿಎ ಉಪಾಧ್ಯಕ್ಷ ಆಶಿಶ್‌ ಶ್ರೀವಾಸ್ತವ ಅವರು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರ ನಿವಾಸದಲ್ಲಿ ಎಂಓಯು ಗೆ ಸಹಿ ಹಾಕಿದರು ಎಂದು ಸರಕಾರದ ಅಧಿಕೃತ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next