Advertisement

ಮಹಿಳೆಯರ ಹಿತಕ್ಕಾಗಿ “ಉಜ್ವಲ’

04:04 PM Aug 18, 2017 | Team Udayavani |

ಹುಮನಾಬಾದ: ಬಡ ಮಹಿಳೆಯರ ಸ್ವಾಭಿಮಾನದ ಜೀವನಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆ ಅನುಷ್ಠಾನಗೊಳಿಸಿ ಮಹಿಳೆಯರ ಕಣ್ಣಿರು ಒರೆಸುವ ಕೆಲಸ ಮಾಡಿದ್ದಾರೆ ಎಂದು ಸಂಸದ ಭಗವಂತ ಖೂಬಾ ಹೇಳಿದರು. ಪಟ್ಟಣದ 1ನೇ ವಾಡ್‌ನ‌ಲ್ಲಿ ಉಜ್ವಲ ಯೋಜನೆಯ ಅರ್ಹ ಫಲಾನುಭವಿಗಳಿಗೆ ಎಲ್‌ಪಿಸಜಿ ಸಂಪರ್ಕ ಅನುಮತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪಡೆದು 70 ವರ್ಷಗಳ ಬಳಿಕ ಕೇಂದ್ರಲ್ಲಿ ಬಡವರ ಸರ್ಕಾರ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅರ್ಹಫಲಾನುಭವಿಗಳು ಅದರ ಲಾಭ ಪಡೆಯಬೇಕು ಎಂದು ಹೇಳಿದರು. ಬಡವರು ಕೂಡ ಉದ್ಯೋಗ ಮಾಡುವ ನಿಟ್ಟಿನಲ್ಲಿ ಮುದ್ರಾ ಯೋಜನೆ ಅನುಷ್ಟಾನಗೊಳಿಸಿ ಅನೇಕರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಅರ್ಹ ಫಲಾನುಭವಿಗಳು ಬ್ಯಾಂಕ್‌ಗೆ ಸಂಪರ್ಕಿಸಿ ಸಾಲ ಯೋಜನೆ ಲಾಭ ಪಡೆದು ಸ್ವಂತ
ಉದ್ಯೋಗ ಪ್ರಾರಂಭಿಸಬಹುದಾಗಿದೆ. ಬಡವರು ಹಣ ಇಲ್ಲದೇ ಬ್ಯಾಂಕ್‌ ಖಾತೆ ತೆರೆಯುವ ಅನುಕೂಲಕ್ಕಾಗಿ ಜನಧನ್‌
ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಈ ಮೂಲ ಅನೇಕರು ಬ್ಯಾಂಕ್‌ ಖಾತೆ ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಇಂದಿನ ದಿನಗಳಲ್ಲಿ ಫಲಾನುಭವಿಗಳು ಅಲೆದಾಡುವುದನ್ನು ಕಡಿಮೆ ಮಾಡಿ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ
ನೇರವಾಗಿ ಸರ್ಕಾರವೆ ಯೋಜನೆಯ ಲಾಭ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಮಾಜಿ ಶಾಸಕ ಸುಭಾಷ ಕಲ್ಲೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮಂಠಾಳಕರ್‌, ಸೋಮನಾಥ ಪಾಟೀಲ, ಪದ್ಮಾಕರ್‌ ಪಾಟೀಲ, ಬಸವರಾಜ ಆರ್ಯ ಮಾತನಾಡಿದರು. ವಿಶ್ವನಾಥ ಪಾಟೀಲ ಮಾಡಗೋಳ, ಓಂಕಾರ ತುಂಬಾ, ಅಶೋಕ ಸಿದ್ದೇಶ್ವರ, ವಿವೇಕ ಗಾದಾ, ಕ್ರಿಸ್ತಾನಂದ ಚಿಟಗುಪ್ಪ, ಗೋಪಿ ಗುಪ್ತಾ, ಬಾಬುರಾವ್‌ ಜಾನವೀರ, ಗೌತಮ, ಗೀರಿಶ ಪಾಟೀಲ, ಪ್ರಭು ನಾಗರಾಳೆ, ಮಲ್ಲಿಕಾರ್ಜುನ ಕುಂಬಾರ, ನೌಸೀನ್‌ ಬೇಗಂ, ಜೈಪಾಲ ಗುಪ್ತಾ, ನಾರಾಯಣರಾವ್‌ ಚಿದ್ರಿ, ಮಧುಕರ್‌ ಹಿಲಾಲಪುರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next