Advertisement

ಸೌರ ಯುಗಾದಿ ಸರಳ ಆಚರಣೆ, ಕೃಷಿ ಚಟುವಟಿಕೆಗೆ ಚಾಲನೆ

03:22 PM Apr 15, 2020 | sudhir |

ಅಜೆಕಾರು: ತುಳು ಸಂಸ್ಕೃತಿಯ ಪ್ರಮುಖ ಹಬ್ಬವಾಗಿರುವ ಸೌರ ಯುಗಾದಿಯನ್ನು ಮನೆ ಮಂದಿಯಷ್ಟೇ ಸೇರಿ ಸರಳ ರೀತಿಯಲ್ಲಿ ಈ ಬಾರಿ ಆಚರಿಸಲಾಗಿದೆ.

Advertisement

ಸೌರ ಯುಗಾದಿಯಂದು ಬಹುತೇಕ ಕೃಷಿಕರು ತಮ್ಮ ಕೃಷಿ ಚಟುವಟಿಕೆಗೆ ಚಾಲನೆ ನೀಡುತ್ತಾರೆ. ಈ ಬಾರಿ ಬೇಸಗೆ ಮಳೆಯು ಉತ್ತಮವಾಗಿ ಸುರಿಯುತ್ತಿರುವುದರಿಂದ ರೈತರು ಉತ್ಸಾಹದಿಂದಲೇ ಕೃಷಿ ಚಟುವಟಿಕೆಗೆ ಚಾಲನೆ ನೀಡಿದರು. ಭತ್ತದ ಗದ್ದೆಗಳನ್ನು ಹದ ಮಾಡುವ ಕಾರ್ಯ ಮಾಡಿ ನಂತರ ಬಿತ್ತನೆ ಬೀಜ ಬಿತ್ತಲು ಚಾಲನೆ ನೀಡಲಾಯಿತು. ಆಧುನಿಕ ಯಂತ್ರೋಪಕರಣಗಳಿದ್ದರೂ ಗ್ರಾಮೀಣರಲ್ಲಿ ಹಲವರು ಸಾಂಪ್ರದಾಯಿಕ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

ಸೌರ ಯುಗಾದಿಯಂದು ಉಳುಮೆ ಮಾಡಿ ಬಿತ್ತನೆ ಬೀಜ ಹಾಕಿದರೆ ಭತ್ತದ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಕೃಷಿಕರದ್ದು.
-ಸುಭಾಷ್‌ ಪೂಜಾರಿ,ಕೃಷಿಕ ಕುಕ್ಕುಜೆ

Advertisement

Udayavani is now on Telegram. Click here to join our channel and stay updated with the latest news.

Next