Advertisement

Udupi ವಾಯ್ಸ ಆಫ್ ಹೀಲಿಂಗ್ಸ್‌: ಸಾಧಕರಿಗೆ ಸಮ್ಮಾನ

01:56 AM Jul 02, 2024 | Team Udayavani |

ಉಡುಪಿ: ವೈದ್ಯರ ದಿನಾಚರಣೆ ಅಂಗವಾಗಿ ಕ್ರಿಯೇಟಿಂಗ್‌ ಪಬ್ಲಿಕ್‌ ಹೆಲ್ತ್‌ ಅವೇರ್ನೆಸ್‌ ಆ್ಯಂಡ್‌ ಸಪೋರ್ಟಿಂಗ್‌ ಹೆಲ್ತ್‌ಕೇರ್‌ ಸಿಸ್ಟಮ್‌ ವಿಭಾಗದಲ್ಲಿ ಮಣಿಪಾಲ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಟಿ.ಗೌತಮ್‌ ಪೈ, ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ.ಶಂಕರ್‌ ಅವರಿಗೆ ಜೀವಮಾನ ಶೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಕಿದಿಯೂರು ಹೊಟೇಲ್‌ನಲ್ಲಿ ರವಿವಾರ ಉಡುಪಿ ಡೆಂಟಾಕೇರ್‌ನ ಮಾಲಕ ಡಾ| ವಿಜಯೇಂದ್ರ ಅವರ ನೇತೃತ್ವದಲ್ಲಿ “ಮೈ ಮೆಲೋಡಿ ಡಾಟ್‌ ಇನ್‌’ ತಂಡದ ಐದನೇ ವರ್ಷಾಚರಣೆ ಪ್ರಯುಕ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಕಿದಿಯೂರು ಹೊಟೇಲ್‌, ಐಎಂಎ, ಐಡಿಎ, ಆಯುಷ್‌, ಪ್ರಸಾದ್‌ ನೇತ್ರಾಲಯದ ಸಹಯೋಗದಲ್ಲಿ “ವಾಯ್ಸ ಆಫ್ ಹೀಲಿಂಗ್ಸ್‌’ ಕಾರ್ಯಕ್ರಮ ನಡೆಯಿತು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ
ವೈದ್ಯಕೀಯ ಶಿಕ್ಷಕರಾದ ಕಸ್ತೂರ್ಬಾ ಆಸ್ಪತ್ರೆಯ ಸಿಒಒ ಡಾ| ಆನಂದ ವೇಣುಗೋಪಾಲ್‌, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಕಾಮತ್‌, ಡೀನ್‌ ಡಾ| ಪದ್ಮರಾಜ ಹೆಗ್ಡೆ, ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ನ ಡೀನ್‌ ಡಾ| ಮೋನಿಕಾ ಸೊಲೋಮನ್‌, ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮೆಡಿಕಲ್‌ ಸೂಪರಿಟೆಂಡೆಂಟ್‌ ಡೀನ್‌ ಡಾ| ನಾಗರಾಜ್‌ ಎಸ್‌. ಹಾಗೂ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ಈಶ್ವರ ಮಲ್ಪೆ, ವಿಶು ಶೆಟ್ಟಿ ಅಂಬಲಪಾಡಿ, ಇಕ್ಬಾಲ್‌ ಅಹಮ್ಮದ್‌ ಹಾಗೂ ರವಿರಾಜ್‌ ಎಚ್‌.ಪಿ.ಅವರನ್ನು ಸಮ್ಮಾನಿಸಲಾಯಿತು.

ಡಾ| ಹರಿಪ್ರಸಾದ್‌ ಶೆಟ್ಟಿ, ಡಾ| ರಮೇಶ್‌ ಶೆಟ್ಟಿ, ಡಾ| ವಿಶ್ವಲತಾ ಸತೀಶ್‌, ಡಾ| ರಾಧೇಶ್ಯಾಮ್‌, ಡಾ| ಸಿಲ್ವಿನಿಯಾ ಎ.ಫೆರ್ನಾಂಡಿಸ್‌ ಅವರು ಮೋಸ್ಟ್‌ ಮೆಲೋಡಿಯಸ್‌ ವಾಯ್ಸ ಆಗಿ ಆಯ್ಕೆಯಾದರು.

ಎಂಎಲ್‌ಸಿ ಡಾ| ಧನಂಜಯ ಸರ್ಜಿ, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೂಡ್ಲು ಕೃಷ್ಣಪ್ರಸಾದ್‌, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಭುವನೇಂದ್ರ ಕಿದಿಯೂರು, ಸಾಯಿರಾಧಾ ಡೆವಲಪರ್ಸ್‌ನ ಪ್ರವರ್ತಕ ಮನೋಹರ ಎಸ್‌. ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಐ.ಪಿ.ಗಡಾದ್‌, ಐಎಂಎ ಉಪಾಧ್ಯಕ್ಷ ಡಾ| ನವೀನ್‌ ಬಲ್ಲಾಳ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next