Advertisement

Udupi ದ್ವಿಚಕ್ರ ವಾಹನಗಳ ಢಿಕ್ಕಿ: ವ್ಯಕ್ತಿಗೆ ಗಾಯ

12:17 AM Sep 05, 2023 | Team Udayavani |

ಉಡುಪಿ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ನಡೆದಿದೆ.

Advertisement

ಗೋವರ್ಧನ ತಂತ್ರಿ ಅವರು ಬೈಕ್‌ನಲ್ಲಿ ಬೀಡಿನಗುಡ್ಡೆ ಡಯಾನ ಟಾಕೀಸ್‌ ಮಾರ್ಗವಾಗಿ ಹೋಗುತ್ತಿರುವಾಗ ಚಿಟ್ಪಾಡಿ ಬಳಿ ಬೀಡಿನಗಡ್ಡೆ ಕಡೆಯಿಂದ ಡಯಾನ ಕಡೆಗೆ ಮಹಮ್ಮದ್‌ ಸರ್ಫರಾಜ್‌ ಎಂಬಾತ ತನ್ನ ಸ್ಕೂಟರನ್ನು ಅತೀವೇಗದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ.

ಪರಿಣಾಮ ಗೋವರ್ಧನ ತಂತ್ರಿಯವರು ಬೈಕ್‌ ಸಹಿತ ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿನ ಬಳಿ ಮೂಳೆಮುರಿತ ಉಂಟಾಗಿದೆ.

ಗಾಯಾಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next