Advertisement

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

01:54 AM Apr 30, 2024 | Team Udayavani |

ಉಳ್ಳಾಲ: ಕುಂಪಲ ಹನುಮಾನ್‌ ನಗರ ನಿವಾಸಿ ಯೋಗೀಶ್‌ (44) ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದ ಮರದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸೋಮವಾರ ಬೆಳಗ್ಗೆ ವರದಿಯಾಗಿದೆ.

Advertisement

ಪತಿ ಆತ್ಮಹತ್ಯೆಗೈದ ಘಟನೆಯ ಬೆನ್ನಿಗೆ ಪತ್ನಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಮದ್ಯಪ್ರವೇಶಿಸಿ ಸಂತೈಸಿದ ಘಟನೆ ನಡೆದಿದೆ.

ಸೆಂಟ್ರಿಂಗ್‌ ಕೆಲಸ ನಿರ್ವಹಿಸುತ್ತಿದ್ದ ಯೋಗೀಶ್‌ ಸ್ಥಳೀಯ ಸ್ವಸಹಾಯ ಸಂಘಕ್ಕೆ ಸಂಬಂಧಿಸಿ ಹಣ ಬಾಕಿಯಿಂದ ನೊಂದು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಯೋಗೀಶ್‌ ಸಂಘದ 40 ಸಾವಿರ ರೂ. ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ ವಿಚಾರದಲ್ಲಿ ಸಂಘದ ಇತರ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆಗೈದಿರುವ ಸಾಧ್ಯತೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯೋಗೀಶ್‌ ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next