Advertisement

ಉಡುಪಿ: ಪಂಜಿನ ಮೆರವಣಿಗೆ

08:05 AM Aug 14, 2017 | Team Udayavani |

ಉಡುಪಿ: ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳದ ಉಡುಪಿ ನಗರ ಘಟಕ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ರವಿವಾರ ಬೃಹತ್‌ ಪಂಜಿನ ಮೆರವಣಿಗೆ ನಡೆಸಿತು. ಜೋಡುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ ಬಸ್‌ ನಿಲ್ದಾಣವರೆಗೆ ಸಾಗಿತು. 

Advertisement

ಬಳಿಕ ನಡೆದ ಸಭೆಯಲ್ಲಿ  ವಿಹಿಂಪ ಜಿಲ್ಲಾಧ್ಯಕ್ಷ  ಪಿ. ವಿಲಾಸ ನಾಯಕ್‌ ದಿಕ್ಸೂಚಿ ಭಾಷಣ ಮಾಡಿ ದೇಶವನ್ನು ಮತ್ತೆ ಒಂದುಗೂಡಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ ಮೆಂಡನ್‌, 
ಜಿಲ್ಲಾ ಸುರಕ್ಷಾ ಪ್ರಮುಖ್‌ ಅನಿಲ್‌ಕುಮಾರ್‌, ನಗರ ಸಂಚಾಲಕ ಲೋಕೇಶ್‌ ಶೆಟ್ಟಿಗಾರ್‌, ವಿಹಿಂಪ ನಗರಾಧ್ಯಕ್ಷ ಸಂತೋಷ ಸುವರ್ಣ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು. ಮೆರವಣಿಗೆ ಆರಂಭದಲ್ಲಿ  ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಆರೆಸ್ಸೆಸ್‌ ಪ್ರಮುಖ ಟಿ. ಶಂಭು ಶೆಟ್ಟಿ, ಬಿಜೆಪಿ ನಾಯಕರಾದ ಯಶಪಾಲ್‌ ಸುವರ್ಣ, ಬಾಲಕೃಷ್ಣ ಶೆಟ್ಟಿ, ಸುಪ್ರಸಾದ ಶೆಟ್ಟಿ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು. 

ಚೀನಿ ವಸ್ತುಗಳಿಗೆ ಬೆಂಕಿ
ಚೀನಿ ವಸ್ತುಗಳಿಗೆ ಬೆಂಕಿ ಹಾಕುವ ಮೂಲಕ ಕಾರ್ಯ ಕ್ರಮವನ್ನು ಸಮಾಪನ ಗೊಳಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next