Advertisement

ಉಡುಪಿ: ಎಸ್ಪಿ, ಡಿಸಿ ಹೆಸರಲ್ಲಿ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ

11:50 PM Dec 23, 2022 | Team Udayavani |

ಉಡುಪಿ: ದುಷ್ಕರ್ಮಿಗಳು ಉಡುಪಿ ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಹಾಗೂ ಜಿಲ್ಲಾಧಿಕಾರಿ ಕೂರ್ಮರಾವ್‌ ಎಂ. ಅವರ ಫೋಟೊ ಬಳಸಿಕೊಂಡು ವಾಟ್ಸಾಪ್‌ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

8839107494 ನಂಬರ್‌ನಿಂದ ಎಸ್ಪಿ ಹಾಗೂ ಡಿಸಿ ಅವರೇ ಮೆಸೇಜ್‌ ಕಳುಹಿಸುವ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದು, ಎಸ್‌ಬಿಐ ಬ್ಯಾಂಕ್‌ನ ಖಾತೆಗೆ ಹಣ ಕಳುಹಿಸುವಂತೆ ತಿಳಿಸಲಾಗುತ್ತದೆ.

ಈ ನಂಬರ್‌ ಮಧ್ಯಪ್ರದೇಶದ ಲೋಕೇಶನ್‌ ತೋರಿಸುತ್ತಿದೆ. ಈ ಮೊಬೈಲ್‌ ನಂಬರ್‌ನಿಂದ ಯಾವುದೇ ಸಂದೇಶ ಬಂದರೂ ಹಣ ಹಾಕಬಾರದು. ಈ ಬಗ್ಗೆ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ದೂರು ನೀಡುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next