Advertisement

ರೈಲು ಢಿಕ್ಕಿ ಹೊಡೆದು ಕಡವೆ ಸಾವು: ಇಂದ್ರಾಳಿ ರೈಲ್ವೇ ಸೇತುವೆ ಸಮೀಪ ಘಟನೆ

06:11 PM Dec 12, 2022 | Team Udayavani |

ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆ ಸಮೀಪ ಸೋಮವಾರ ಮುಂಜಾನೆ ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲಿಗೆ 5 ವರ್ಷ ಪ್ರಾಯದ ಗಂಡು ಕಡವೆಯೊಂದು ಅಡ್ಡ ಬಂದು ರೈಲಿಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡು ಮೃತಪಟ್ಟಿದೆ.

Advertisement

ರೈಲ್ವೇ ಪೊಲೀಸರು ಗಸ್ತಿನಲ್ಲಿರುವಾಗ ಕಡವೆ ಮೃತಪಟ್ಟಿರುವುದು ತಿಳಿದುಬಂದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಉಡುಪಿ ಉಪ ವಲಯ ಅರಣ್ಯಾಧಿಕಾರಿ ಸುರೇಶ್‌ ಗಾಣಿಗ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪಶುವೈದ್ಯರಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ಇಲಾಖೆ ನಿಯಮಾವಳಿಯಂತೆ ಬಡಗುಬೆಟ್ಟು ಅರಣ್ಯದಲ್ಲಿ ಕಡವೆ ದೇಹವನ್ನು ವಿಲೇವಾರಿಗೊಳಿಸಲಾಯಿತು.

ಇದನ್ನೂ ಓದಿ: 108 ಆಂಬ್ಯುಲೆನ್ಸ್ ನಿರ್ವಹಣೆ ಸಿಬಂದಿ ವೈಫಲ್ಯ : ಸ್ಟಿಂಗ್ ಆಪರೇಷನ್ ನಿಂದ ಬಯಲು ಮಾಡಿದ ತಹಶೀಲ್ದಾರ್

Advertisement

Udayavani is now on Telegram. Click here to join our channel and stay updated with the latest news.

Next