Advertisement

Udupi: ಕೊನೆಗೂ ಮಗನನ್ನು ಸೇರಿದ ತಾಯಿ

01:17 AM Oct 02, 2024 | Team Udayavani |

ಉಡುಪಿ: ಮಾನಸಿಕ ಅಸ್ವಸ್ಥರಾಗಿದ್ದ ಮಹಿಳೆಯನ್ನು ಇಪ್ಪತ್ತು ದಿನಗಳ ಹಿಂದೆ ಸಮಾಜ ಸೇವಕ ವಿಶು ಶೆಟ್ಟಿಯವರು ರಕ್ಷಿಸಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಖೀ ಕೇಂದ್ರದ ನೆರವಿನಿಂದ ಮಗನಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮಹಿಳೆ ಕಮಲಮ್ಮ (50) ಮೂಲತಃ ಹುಬ್ಬಳ್ಳಿಯವರಾಗಿದ್ದು ಕೆಲವು ದಿನ ಗಳಿಂದ ನಗರದಲ್ಲಿ ಸುತ್ತಾಡಿಕೊಂಡು ಅಸಹಾಯಕರಾಗಿ ಮಾನಸಿಕ ಖಿನ್ನತೆ ಗೊಳಗಾಗಿದ್ದರು. ರಾತ್ರಿ ಹೊತ್ತು ರಸ್ತೆ ಬದಿ ದುಃಖದಿಂದ ಇದ್ದ ಇವರನ್ನು ವಿಶು ಶೆಟ್ಟಿಯವರು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು. 15 ದಿನಗಳ ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕುಟುಂಬಿಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಸಖಿ ಕೇಂದ್ರಕ್ಕೆ ದಾಖಲಿಸಿದ್ದರು. ಮಹಿಳೆ ನೀಡಿದ ಮಾಹಿತಿ ಮೇರೆಗೆ ಮನೆಯವರ ಪತ್ತೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬಿತ್ತರಿಸಲಾಗಿತ್ತು. ಸಖೀ ಕೇಂದ್ರದ ಸಿಬಂದಿ ಮಹಿಳೆ ನೀಡಿದ ಮಾಹಿತಿಯ ಅನುಸಾರ ಹುಬ್ಬಳ್ಳಿ- ಧಾರವಾಡದಲ್ಲಿ ಮನೆಯವರ ಪತ್ತೆಗಾಗಿ ಪ್ರಯತ್ನಿಸಿ ಕುಟುಂಬಿಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಮಹಿಳೆಯ ಮಗ ಹುಬ್ಬಳ್ಳಿಯಿಂದ ಉಡುಪಿಗೆ ಆಗಮಿಸಿ ಮಹಿಳೆಯನ್ನು ವಶಕ್ಕೆ ಪಡೆದು ಊರಿಗೆ ಕರೆದುಕೊಂಡು ಹೋಗಿದ್ದಾರೆ.

ಮಹಿಳೆಯ ರಕ್ಷಣ ಕಾರ್ಯದಲ್ಲಿ ಮಹಿಳಾ ಪೊಲೀಸ್‌ ಠಾಣೆಯ ಸಿಬಂದಿ, ಜಯಶ್ರೀ ಉದ್ಯಾವರ, ಬಾಳಿಗಾ ಆಸ್ಪತ್ರೆ ವೈದ್ಯರು, ಸಿಬಂದಿ, ಸಖಿ ಕೇಂದ್ರದ ಸಿಬಂದಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next