Advertisement

ಉಡುಪಿ ನಗರಸಭೆ ಸಾಮಾನ್ಯ ಸಭೆಗೆ ಬಂದ ವ್ಯಕ್ತಿಗೆ ಕೈ ಸದಸ್ಯರಿಂದ ಥಳಿತ 

03:24 PM Jun 29, 2017 | Team Udayavani |

ಉಡುಪಿ: ಕಾನೂನು ಬಾಹಿರವಾಗಿ ಏಕಾಏಕಿ ಸಾಮಾನ್ಯ ಸಭೆಗೆ ನುಗ್ಗಿದ ವ್ಯಕ್ತಿಗೆ ಆಡಳಿತ ಪಕ್ಷದ ಸದಸ್ಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉಡುಪಿ ನಗರಸಭೆಯಲ್ಲಿ ಗುರುವಾರ ನಡೆದಿದೆ.

Advertisement

ಘಟನೆ ಏನು? 

ಕಡಿಯಾಳಿ ವಾರ್ಡ್‌ ಸದಸ್ಯೆ ಗೀತಾ ಶೇಟ್‌ ಅವರು ಕಾಂಗ್ರೆಸ್‌ ಪಕ್ಷ ತ್ಯಜಿಸಿ, ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರ ಕಾರ್ಯವೈಖರಿಯನ್ನು ಸಮರ್ಥಿಸಲು ಸಭೆಗೆ ಬಂದ ರೋನಿ ಡಿ’ಮೆಲ್ಲೊ ಎಂಬ ವ್ಯಕ್ತಿಯ ಮೇಲೆ ಒಮ್ಮೆಲೆ ಎರಗಿದ ಹತ್ತಾರು ಸದಸ್ಯರು ಕಾಂಗ್ರೆಸ್‌ ಸದಸ್ಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. 

Advertisement

ಇಲ್ಲಿ ಹೊರಗಿನವರಿಗೆ ಮಾತನಾಡಲು ಅವಕಾಶವಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ರೋನಿ ಅವರನ್ನು ಥಳಿಸಿ,ಎಳೆದಾಡಿ ಹೊರ ಹಾಕಲು ಯತ್ನಿಸಿದ್ದಾರೆ.

ಇದೀಗ ಥಳಿತಕ್ಕೊಳಗಾಗಿರುವ ರೋನಿ ಅವರನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.  ಆಸ್ಪತ್ರೆಗೆ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ನಡೆದ ಬಳಿಕ ನಗರಸಭೆಗೆ ಪೊಲೀಸರು ಭೇಟಿ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next