Advertisement
ಮಂಗಳವಾರ ಏಕಾದಶಿಯಾದ ಕಾರಣ ಬುಧ ವಾರ ಬೆಳಗ್ಗೆ ಬೇಗ ಪೂಜೆಗಳು ನಡೆದವು. ಅಪರಾಹ್ನ ರಥಬೀದಿಯಲ್ಲಿ ನಿರ್ಮಿಸಿದ ಅಟ್ಟಣಿಗೆಗಳಲ್ಲಿ ಹಣತೆಗಳಿಗೆ ಮುಹೂರ್ತವನ್ನು (ಗೋಮಯದ ಮೇಲೆ ಹಣತೆಗಳನ್ನು ಇಡುವುದು) ಪರ್ಯಾಯ ಶ್ರೀ ಪೇಜಾವರ ಉಭಯ ಶ್ರೀಪಾದರು, ಶ್ರೀ ಕಾಣಿಯೂರು ಶ್ರೀಪಾದರು ನಡೆಸಿದರು. ಮಧ್ವ ಸರೋವರದಲ್ಲಿ ನಡೆದ ತುಳಸೀ ಪೂಜೆ, ಕ್ಷೀರಾಬ್ಧಿ ಪೂಜೆಯಲ್ಲಿ ಪೇಜಾವರ ಉಭಯ ಶ್ರೀಪಾದರು, ಶ್ರೀ ಕೃಷ್ಣಾಪುರ, ಶ್ರೀ ಅದಮಾರು, ಶ್ರೀ ಕಾಣಿಯೂರು ಶ್ರೀಪಾದರು ಪಾಲ್ಗೊಂಡರು.ಶ್ರೀಕೃಷ್ಣ ಮಠದಲ್ಲಿ ಬುಧವಾರ ರಾತ್ರಿ ಲಕ್ಷದೀಪೋತ್ಸವ ಅಂಗವಾಗಿ ತೆಪ್ಪೋತ್ಸವ ಜರಗಿತು.
Related Articles
ಈ ಲಕ್ಷದೀಪೋತ್ಸವದ ವಿಶೇಷವೆಂದರೆ ಗುರು ವಾರ ದಿಂದ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ನಡೆಸು ತ್ತಿರುವ ಶ್ರೀಮನ್ನಾ éಯಸುಧಾ ಪಾಠದ ಮಂಗಲೋ ತ್ಸವ ನಡೆಯಲಿದೆ. ಮಂಗಲೋತ್ಸವ ನ. 6 ರಂದು ನಡೆಯಲಿದ್ದು ಅಲ್ಲಿಯವರೆಗೆ ವಿವಿಧ ಮಠಾ ಧೀಶರು, ವಿದ್ವಾಂಸರ ಸಮ್ಮುಖ ವಿದ್ಯಾರ್ಥಿ ಗಳಿಗೆ ಪರೀಕ್ಷೆ ನಡೆಯಲಿದೆ. ನ. 7ರಂದು ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ಗುರುಗಳಾದ ಶ್ರೀ ಸತ್ಯ ಪ್ರಮೋದತೀರ್ಥರ ಆರಾಧನೋತ್ಸವ ಜರಗಲಿದೆ. ಈ ಎಲ್ಲ ಕಾರ್ಯಕ್ರಮಗಳಿಗಾಗಿ ರಾಜಾಂಗಣದ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೆಳಭಾಗವನ್ನು ಬಿಟ್ಟುಕೊಡಲಾಗುತ್ತಿದೆ. ಉತ್ತರಾದಿ ಮಠದ ಸಾವಿರಾರು ಶಿಷ್ಯ ವರ್ಗದವರು ಆಗಮಿಸಲಿದ್ದಾರೆ. ಉಡುಪಿ: ಶ್ರೀಕೃಷ್ಣ ಮಠದಲ್ಲಿ ಬುಧವಾರ ರಾತ್ರಿ ಲಕ್ಷದೀಪೋತ್ಸವ ಅಂಗವಾಗಿ ತೆಪ್ಪೋತ್ಸವ ಜರಗಿತು.
Advertisement