Advertisement

ಕೃಷ್ಣಮಠದಲ್ಲಿ ಎಡೆಸ್ನಾನ, ಮಡೆಸ್ನಾನ ನಿಷೇಧ; ಪಲಿಮಾರುಶ್ರೀ ನಿರ್ಧಾರ

05:16 PM Dec 13, 2018 | Team Udayavani |

ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ಷಷ್ಠಿ ಮಹೋತ್ಸವ ನಡೆಯಿತು. ಆದರೆ ಈ ಬಾರಿ ಸಾಂಪ್ರದಾಯಿಕ ಎಡೆಸ್ನಾನ, ಮಡೆಸ್ನಾನ ನಡೆಯಲಿಲ್ಲ.ಕೆಲವು ಭಕ್ತರು ಉರುಳು ಸೇವೆ ನಡೆಸಿದರು. ಅಷ್ಟೇ ಅಲ್ಲ ಇನ್ನುಂದೆ ಕೃಷ್ಣಮಠದಲ್ಲಿ ಎಡೆಸ್ನಾನ, ಮಡೆಸ್ನಾನ ನಿಷೇಧಿಸಲು ಪಲಿಮಾರುಶ್ರೀಗಳು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

Advertisement

ಈ ಹಿಂದೆ ಕೃಷ್ಣಮಠದಲ್ಲಿನ ಸುಬ್ರಹ್ಮಣ್ಯ ಗುಡಿ ಸಮೀಪ ಷಷ್ಠಿ ಮಹೋತ್ಸವದ ವೇಳೆ ಎಡೆಸ್ನಾನ, ಮಡೆಸ್ನಾನ ನಡೆಯುತ್ತಿತ್ತು. ಆದರೆ ತೀವ್ರ ವಿವಾದ ಹಾಗೂ ಕೋರ್ಟ್ ಆದೇಶದಿಂದ ಮಡೆಸ್ನಾನ ನಿಲ್ಲಿಸಲಾಗಿತ್ತು. ಎಡೆಸ್ನಾನ ಮುಂದುವರಿದಿತ್ತು.

ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿತ್ತು. ಹೀಗಾಗಿ ಷಷ್ಠಿ ಮಹೋತ್ಸವದ ವೇಳೆ ಎಡೆಸ್ನಾನ, ಮಡೆಸ್ನಾನ ನಿಷೇಧಿಸಲು ಪಲಿಮಾರುಶ್ರೀಗಳು ಸೇರಿದಂತೆ ಅಷ್ಟಮಠಾಧೀಶರು ನಿರ್ಧರಿಸಿದ್ದಾರೆ. ನಾನು ಕೂಡಾ ಈ ವಿಚಾರದಲ್ಲಿ ತಟಸ್ಥನಾಗುವುದಾಗಿ ತಿಳಿಸಿದ್ದೇನೆ. ಯಾವುದರ ಬಗ್ಗೆ ವಿವಾದ ಇದೆಯೋ ಅದರ ಬಗ್ಗೆ ಆಗ್ರಹ ಯಾಕೆ, ಇದರಿಂದ ಧರ್ಮಕ್ಕೇನೂ ನಷ್ಟವಿಲ್ಲ ಎಂದು ಪೇಜಾವರಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next