Advertisement

Udupi: ಭಂಡಾರಕೇರಿ ಶ್ರೀಪಾದರಿಗೆ ಶ್ರೀ ಪುತ್ತಿಗೆ ಮಠದ ವತಿಯಿಂದ ಭವ್ಯ ಸ್ವಾಗತ

08:58 PM Jul 24, 2024 | Team Udayavani |

ಉಡುಪಿ: ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು 36 ವರ್ಷಗಳ ಬಳಿಕ ಚಾತುರ್ಮಾಸ ವ್ರತ ಕೈಗೊಳ್ಳಲು ಉಡುಪಿಗೆ ಬುಧವಾರ ಆಗಮಿಸಿದ್ದು, ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಭವ್ಯ ಸ್ವಾಗತ ನೀಡಿ, ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

Advertisement

ಶ್ರೀಪಾದರು ಮತ್ತು ಮಠದ ಪಟ್ಟದ ದೇವರನ್ನು ಸುವರ್ಣ ಪಲ್ಲಕ್ಕಿಯೊಂದಿಗೆ ಸ್ವಾಗತಿಸಿ ಸಂಸ್ಕೃತ ಕಾಲೇಜಿನಿಂದ ರಥಬೀದಿವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಭಂಡಾರಕೇರಿ ಶ್ರೀಪಾದರಿಗೆ ಪುತ್ತಿಗೆ ಶ್ರೀಪಾದರು ಸಾಂಪ್ರದಾಯಿಕ ಸ್ವಾಗತ ಕೋರಿದರು. ರಾಜಾಂಗಣದಲ್ಲಿ ಸ್ವಾಗತ ಸಮಾರಂಭ ನಡೆಯಿತು.

ಪರ್ಯಾಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಪ್ರಸನ್ನ ಅವರು ಶ್ರೀ ವಿದ್ಯೆಶತೀರ್ಥ ಶ್ರೀಪಾದರು ಸ್ವಯಂ ರಚಿಸಿದ ದಾಸರ ಪದವನ್ನು ಗೀತೆಯಾಗಿ ಹಾಡಿದರು. ವಿದ್ವಾನ್‌ ಬಿದರಹಳ್ಳಿ ರಘೋತ್ತಮಾಚಾರ್ಯ ಅಭಿನಂದನ ಭಾಷಣ ಮಾಡಿದರು. ಸ್ವಾಗತ ಸಮಿತಿಯ ಯು. ಬಿ. ಶ್ರೀನಿವಾಸ್‌ ಪ್ರಸ್ತಾವನೆಗೈದರು. ವಿದ್ವಾನ್‌ ಡಾ| ಗೋಪಾಲಾಚಾರ್ಯ ನಿರೂಪಿಸಿದರು. ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಚಾರ್ಯ, ರತೀಶ್‌ ತಂತ್ರಿ , ಪ್ರದೀಪ್‌ ಕಲ್ಕುರ, ಸ್ವಾಗತ ಸಮಿತಿಯ ಚಂದ್ರಶೇಖರ್‌ ಆಚಾರ್ಯ, ರಾಜೇಶ್‌ ಭಟ್‌, ಜಯರಾಮಚಾರ್ಯ, ರಮೇಶ್‌ ಭಟ್‌, ರವೀಂದ್ರಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

ಮಧ್ವಾಚಾರ್ಯರಿಂದ ಜಗತ್ತಿಗೆ ಜ್ಞಾನದ ಬೆಳಕು
ಜಗತ್ತಿನ ಒಳಿತು ಮಾಡಲು ಭಗವಂತನ ಯೋಗ ನಿದ್ರೆಯ ಕಾಲವಿದು. ಇದರಿಂದ ಸಜ್ಜನರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಶ್ರೀ ಮಧ್ವಾಚಾರ್ಯರು ಜಗತ್ತಿಗೆ ಜ್ಞಾನದ ಬೆಳಕು ನೀಡಿದವರು. ತುಳುನಾಡಿನಲ್ಲಿ ಅವತಾರ ಎತ್ತಿದ ಅವರು ತೌಳವರು ಎಂಬ ಹೆಮ್ಮೆ ಇರಲಿ ಎಂದು ಭಂಡಾರಕೇರಿ ಶ್ರೀಪಾದರು ಆಶೀರ್ವಚನದಲ್ಲಿ ನುಡಿದರು. ಭಗವಂತನ ಉಪಾಸನೆಯಿಂದ ಎಲ್ಲ ಸಂಕಷ್ಟಗಳು ದೂರವಾಗುತ್ತವೆ. ತಮ್ಮ ಅಪೇಕ್ಷೆಯಂತೆ ಭಂಡಾರಕೇರಿ ಶ್ರೀಪಾದರು ಉಡುಪಿಗೆ ಚಾತುರ್ಮಾಸ ವ್ರತ ಕೈಗೊಳ್ಳಲು ಆಗಮಿಸಿದ್ದಾರೆ. ಬಾಲ್ಯದ ಗುರುಕುಲ ಶಿಕ್ಷಣವನ್ನು ಜತೆಯಾಗಿ ಪಡೆದವರು ನಾವು ಎಂದು ಪುತ್ತಿಗೆ ಶ್ರೀಪಾದರು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next