Advertisement

ಉಡುಪಿ: ಧಾನ್ಯ ಗಣೇಶ ರಚನೆ, ಪ್ರದರ್ಶನ

12:45 PM Sep 13, 2018 | Team Udayavani |

ಉಡುಪಿ: ಉಡುಪಿಯ ಟಿವಿಎಸ್‌ ಶೋರೂಂ ಸಾಯಿರಾಧಾ ಮೋಟಾರ್ನಲ್ಲಿ ಕಲಾ ಪ್ರೋತ್ಸಾಹಕ ಮನೋಹರ ಎಸ್‌. ಶೆಟ್ಟಿ ಪ್ರಾಯೋಜಕತ್ವದಲ್ಲಿ ಕಲಾವಿದರಾದ ಶ್ರೀನಾಥ ಮಣಿಪಾಲ, ರವಿ ಹಿರೇಬೆಟ್ಟು ಅವರು ಈ ಬಾರಿ ವಿಶೇಷವಾಗಿ ಧಾನ್ಯ ಗಣೇಶ ವಿಗ್ರಹ ರಚಿಸಿದ್ದು, ಪ್ರದರ್ಶನಕ್ಕಿಡಲಾಗಿದೆ.

Advertisement

ಸುಮಾರು 20 ಕೆಜಿ ಅವರೆಕಾಳು, ಬಟಾಣಿ, ಕಡ್ಲೆಕಾಳು, ಬಿಳಿ ಬೀನ್ಸ್‌, ಕೆಂಪು ಬೀನ್ಸ್‌, ಕಪ್ಪು ಬೀನ್ಸ್‌, ಸಾಬಕ್ಕಿ, ಸಾಸಿವೆ, ಉರಿ ಕಡ್ಲೆಕಾಳು ಹಾಗೂ ಮೈದಾ ಹಿಟ್ಟಿನ ಗಮ್‌ ಬಳಸಿ 10 ದಿನಗಳಲ್ಲಿ ಗಣೇಶನನ್ನು ಆಕರ್ಷಕವಾಗಿ ರಚಿಸಿದ್ದಾರೆ. 10 ದಿನಗಳ ಕಾಲ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ತೆರೆದಿರುತ್ತದೆ. ಕಲಾವಿದದ್ವಯರು ಕಳೆದೈದು ವರ್ಷಗಳಿಂದ ಬಿಸ್ಕತ್‌, ಪೇಪರ್‌, ಗುಡಿ ಕೈಗಾರಿಕೆಯ ವಸ್ತುಗಳ ಮೂಲಕ ವೈಶಿಷ್ಟ್ಯ ಪೂರ್ಣ ಗಣೇಶನ ವಿಗ್ರಹ ರಚಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next