Advertisement

Udupi; ಜ.21ರಿಂದ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ

04:17 PM Jan 20, 2024 | |

ಉಡುಪಿ: ಆದರ್ಶ ಆಸ್ಪತ್ರೆ, ಉಡುಪಿ ಮತ್ತು ARMC IVF ಫರ್ಟಿಲಿಟಿ ಸೆಂಟರ್ ಇವರ ಸಂಯೋಜನೆಯಲ್ಲಿ ಜನವರಿ 21ರಂದು ಬಂಜೆತನ ತಪಾಸಣಾ ಶಿಬಿರ- ಉಚಿತ ಸಮಾಲೋಚನೆಯನ್ನು ಏರ್ಪಡಿಸಲಾಗಿದೆ.

Advertisement

ಜ.21 ಭಾನುವಾರ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಉಡುಪಿ, ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್ ಬಳಿ ಇರುವ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಶಿಬಿರ ನಡೆಯಲಿದೆ.

ಈ ಕೆಳಗಿನ ಯಾವುದೇ ಸಮಸ್ಯೆಗಳಿದ್ದಲ್ಲಿ ಇಲ್ಲಿ ನಡೆಯಲಿರುವ ಉಚಿತ ಶಿಬಿರಕ್ಕೆ ಭೇಟಿ ನೀಡಬಹುದು.

* ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ

* ಅನೇಕ ಬಾರಿ ಗರ್ಭಪಾತವಾಗಿದ್ದರೆ

Advertisement

* ಅನೇಕ ಐಯುಐ ಅಥವಾ ಐವಿಎಫ್ ವೈಫಲತೆ ಹೊಂದಿದ್ದರೆ

* ವರದಿಗಳು ಸಾಮಾನ್ಯವಾಗಿದ್ದರೂ ಗರ್ಭ ಧರಿಸಲು ಅಸಾಧ್ಯವಾಗಿದ್ದರೆ

* ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದಿರುವುದು

* ಪಿಸಿಓಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೆಟ್ರಿಯಾಸಿಸ್ ಅಥವಾ ಗರ್ಭಾಶಯದ ಫೈಬ್ರಾಡ್ ನಂತಹ ಸಮಸ್ಯೆ ಇದ್ದರೆ

* ದ್ವಿತೀಯ ಅಭಿಪ್ರಾಯ

ಡಾ| ಸೂಸನ್ ಪ್ರದೀಪ್, ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, IVF ಸಂಯೋಜಕರು- ARMC IVF, ಮಂಗಳೂರು; ಡಾ| ದಮಯಂತಿ-ಸೀನಿಯರ್ ಕನ್ಸಲ್ಟೆಂಟ್ ಪ್ರಸೂತಿ ತಜ್ಞೆ & ಸ್ತ್ರೀರೋಗ ತಜ್ಞೆ -ಆದರ್ಶ ಆಸ್ಪತ್ರೆ, ಉಡುಪಿ; ಡಾ| ರಂಜಿತಾ ಎಸ್.ನಾಯಕ್-ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ-ಆದರ್ಶ ಆಸ್ಪತ್ರೆ, ಉಡುಪಿ ಈ ಶಿಬಿರದಲ್ಲಿ ನಿಮಗೆ ಉಚಿತವಾಗಿ ಮಾಹಿತಿ ಒದಗಿಸಲಿರುವರು. ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ: 0820 2702100-109, 9663 330864, 9611 186196

 

Advertisement

Udayavani is now on Telegram. Click here to join our channel and stay updated with the latest news.

Next