Advertisement

Udupi; ಕೈಮಗ್ಗ ಮೇಳಕ್ಕೆ ಪುತ್ತಿಗೆ ಶ್ರೀಪಾದರಿಂದ ಚಾಲನೆ

06:07 PM Aug 01, 2024 | Team Udayavani |

ಉಡುಪಿ: ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ವತಿಯಿಂದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಕೈಮಗ್ಗ ಸೀರೆಗಳ ಮೌಲ್ಯವರ್ಧನೆ ಮತ್ತು ಉನ್ನತೀಕರಣಕ್ಕಾಗಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಶ್ರೀಕೃಷ್ಣಮಾಸೋತ್ಸವ ಪ್ರಯುಕ್ತ ರಾಜಾಂಗಣದಲ್ಲಿ ಅ. 11ರ ವರೆಗೆ ಹಮ್ಮಿಕೊಂಡಿರುವ ಕೈಮಗ್ಗ ಸೀರೆಗಳ ಉತ್ಸವ – 2024ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚಾಲನೆ ನೀಡಿ ಅನುಗ್ರಹಿಸಿದರು.

Advertisement

ಆಧುನಿಕ ಸೀರೆಗಳು ನೋಡಲು ಚಂದ ಇರಬಹುದು ಆದರೆ ಅಲ್ಪಕಾಲ ಮಾತ್ರ ಬಾಳಿಕೆ ಬರುವಂತದ್ದು, ಕೈಮಗ್ಗದ ಸೀರೆಗಳು ಸಾಂಪ್ರದಾಯಿಕವಾಗಿಯೂ ದೀರ್ಘ‌ಕಾಲ ಬಾಳಿಕೆಗೆ ಬರುವಂತದ್ದಾಗಿದೆ. ಸೀರೆಯುವ ಭಾರತೀಯ ಸಾಂಸ್ಕೃತಿ ಮೌಲ್ಯದ ರಕ್ಷಕವಾಗಿದೆ. ದೇವತೆಗಳು ಸೀರೆಯಲ್ಲೇ ಕಾಣಿಸಿಕೊಂಡಿದ್ದಾರೆ. 16,108 ಸಾವಿರ ಸೀರೆ ಮಾರಾಟ ಆಗುವಂತಾಗಲಿ ಎಂದು ಹರಸಿದರು.

ಪೌರಾಯುಕ್ತ ರಾಯಪ್ಪ, ಉಡುಪಿ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್‌, ಡೆಂಟಾ ಕೇರ್‌ನ ಡಾ| ವಿಜಯೇಂದ್ರ ರಾವ್‌, ಉಜ್ವಲ್‌ ಡೆವಲಪರ್ ನ ಅಜಯ್‌ ಪಿ.ಶೆಟ್ಟಿ, ಪಾಟೀಲ್‌ ಸ್ಟೋರ್ ನ ಗಣೇಶ್‌ ಪಾಟೀಲ್‌, ನಗರಸಭೆ ಸದಸ್ಯರಾದ ರಜನಿ ಹೆಬ್ಬಾರ್‌, ಟಿ.ಜಿ. ಹೆಗ್ಡೆ, ಉದ್ಯಮಿ ಹರಿಯಪ್ಪ ಕೋಟ್ಯಾನ್‌, ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ರಮೇಶ್‌ ಭಟ್‌, ಉಪಾಧ್ಯಕ್ಷರಾದ ಮಂಜುನಾಥ ಮಣಿಪಾಲ, ಸರೋಜಾ ಯಶವಂತ್‌, ಕಾರ್ಯದರ್ಶಿ ಅವಿನಾಶ್‌ ಮಾರ್ಪಳ್ಳಿ, ಪದಾಧಿಕಾರಿಗಳಾದ ಅಶೋಕ್‌ ಶೆಟ್ಟಿಗಾರ್‌ ಅಲೆವೂರು, ವಿಟ್ಠಲ ಶೆಟ್ಟಿಗಾರ್‌, ರಾಜಕೇಸರಿ, ಶ್ರೀನಿವಾಸ ಶೆಟ್ಟಿಗಾರ್‌ ಬೈಲೂರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್‌ ಇಂದ್ರಾಳಿ ಪ್ರಸ್ತಾವನೆಗೈದರು. ಆಯೋಜನ ಸಮಿತಿ ಅಧ್ಯಕ್ಷ ಡಾ| ಚಂದನ್‌ ಶೆಟ್ಟಿಗಾರ್‌ ಸ್ವಾಗತಿಸಿ, ಸದಾಶಿವ ಗೋಳಿಜಾರು ನಿರೂಪಿಸಿದರು.

ಕೈಮಗ್ಗ ಸೀರೆ ಪ್ರದರ್ಶನ
ಉದ್ಘಾಟನೆಯ ಅನಂತರ ಪುತ್ತಿಗೆ ಶ್ರೀಪಾದರು ಮಳಿಗೆಗಳಿಗೆ ಭೇಟಿ ನೀಡಿ ಕೈಮಗ್ಗಗಳಿಂದ ಸಿದ್ಧಪಡಿಸಿದ ಸೀರೆಗಳನ್ನು ವೀಕ್ಷಿಸಿದರು. ಉಡುಪಿ, ಮಂಗಳೂರು, ಇಳಿಕಲ್‌, ದೊಡ್ಡಬಳ್ಳಾಪುರ, ಜಮಖಂಡಿ, ಚನ್ನರಾಯಪಟ್ಟಣ, ಚಾಮರಾಜನಗರ, ಕೊಳ್ಳೇಗಾಲ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ 30ಕ್ಕೂ ಅಧಿಕ ಕೈಮಗ್ಗ ಸೀರೆಗಳ ಉತ್ಪಾದಕರು ಮತ್ತು ಮಾರಾಟಗಾರರು ಭಾಗವಹಿಸಿದ್ದಾರೆ.

Advertisement

ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಬರುತ್ತಿವೆ. ಕೆಲವು ದೇವಸ್ಥಾನಗಳು ಈಗಾಗಲೇ ವಸ್ತ್ರಸಂಹಿತೆ ಜಾರಿಗೆ ತಂದಿದೆ. ಕೆಲವು ದೇವಸ್ಥಾನಗಳು ವಸ್ತ್ರಸಂಹಿತೆ ಜಾರಿ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿವೆ. ಉಡುಪಿ ಶ್ರೀ ಕೃಷ್ಣಮಠದಲ್ಲೂ ವಸ್ತ್ರಸಂಹಿತೆ ಜಾರಿ ಮಾಡಬೇಕು ಎಂಬ ಒತ್ತಡ ಇದೆ. ವಸ್ತ್ರಸಂಹಿತೆ ಜಾರಿ ಮಾಡುವುದರಿಂದ ದೇವಸ್ಥಾನಕ್ಕೆ ಸೀರೆ ಉಟ್ಟು ಬರುವವರ ಸಂಖ್ಯೆ ಹೆಚ್ಚಲಿದೆ. ಇದರಿಂದ ಸೀರೆ ಉದ್ಯಮವೂ ಬೆಳೆಯಲಿದೆ ಎಂದು ಶ್ರೀಪಾದರು ಹೇಳಿದರು.

ಚಿತ್ರಗಳು : ಆಸ್ಟ್ರೋ ಮೋಹನ್

Advertisement

Udayavani is now on Telegram. Click here to join our channel and stay updated with the latest news.

Next