Advertisement

Udupi: ಡಾ.ಪ್ರಕಾಶ್‌ ಶೆಟ್ಟಿ ಬಂಜಾರ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ

12:56 AM Aug 27, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ನೇತೃತ್ವದಲ್ಲಿ ಶ್ರೀ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಲೀಲೋತ್ಸವ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಂಗಳೂರು ವಿ ವಿ ಯ ಗೌರವ ಡಾಕ್ಟರೆಟ್‌ಗೆ ಭಾಜನರಾದ ಎಂಆರ್‌ಜಿ ಗ್ರೂಪ್ಸ್‌ ಮುಖ್ಯಸ್ಥ ಡಾ| ಪ್ರಕಾಶ್‌ ಶೆಟ್ಟಿ ಬಂಜಾರ ಅವರನ್ನು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಯೊಂದಿಗೆ ಗೌರವಿಸಿದರು.

Advertisement

ಶ್ರೀ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಗಣ್ಯರಾದ ಕೆ. ವಾಸುದೇವ ಶೆಟ್ಟಿ ಕಾಪು, ಮನೋಹರ್‌ ಶೆಟ್ಟಿ ಕಾಪು, ಮಟ್ಟಾರು ರತ್ನಾಕರ ಹೆಗ್ಡೆ, ಉದಯ್‌ ಕುಮಾರ್‌ ಶೆಟ್ಟಿ, ವಿಜಯ್‌ ಭಾರದ್ವಾಜ್‌, ಕೆ. ಎನ್‌. ರಾಘವೇಂದ್ರ ರಾವ್‌, ಡಾ| ಪ್ರೇಮಾ ಎಚ್‌.ಎಸ್‌., ರತ್ನಾಕರ ಇಂದ್ರಾಳಿ, ಶಶಿಕುಮಾರ್‌ ತಿಮ್ಮಯ್ಯ, ಹರೀಶ್‌ ಮಧ್ಯಸ್ಥ, ಶ್ರೀವತ್ಸ ಆಚಾರ್‌, ಪುತ್ತಿಗೆ ಮಠದ ಪ್ರಮುಖರಾದ ಡಾ| ಬಿ. ಗೋಪಾಲಾಚಾರ್ಯ, ರಮೇಶ್‌ ಭಟ್‌, ಸಂತೋಷ್‌ ಪಿ. ಶೆಟ್ಟಿ ತೆಂಕರಗುತ್ತು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next