Advertisement

Udupi: ಶ್ರೀಕೃಷ್ಣ ಮಠಕ್ಕೆ‌ ತೆಲುಗು ನಟ ಜ್ಯೂ. ಎನ್ ಟಿಆರ್ ಭೇಟಿ

03:10 PM Aug 31, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠಕ್ಕೆ ತೆಲುಗು ಚಿತ್ರರಂಗದ ಪ್ರಸಿದ್ದ ನಟ ಜ್ಯೂನಿಯರ್ ಎನ್‌ಟಿಆರ್ (Jr NTR) ಅವರು ಶ್ರಾವಣಮಾಸ ಶನಿವಾರ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು.

Advertisement

ತಮ್ಮ ತಾಯಿ ಶಾಲಿನಿ ನಂದಾಮುರಿ ಅವರೊಂದಿಗೆ ಉಡುಪಿಗೆ ಆಗಮಿಸಿದ್ದ ಅವರು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ, ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು.

ಶಾಲಿನಿ ನಂದಮುರಿ ಅವರು 40 ವರ್ಷಗಳ ಹಿಂದೆ ಪುತ್ರನನ್ನು ಉಡುಪಿ ಶ್ರೀ ಕೃಷ್ಣ ದೇವರ ದರ್ಶನಕ್ಕೆ ಕರೆದುಕೊಂಡು ಬರಬೇಕು ಎಂಬ ಕನಸು ಕಂಡಿದ್ದರಂತೆ. ಇದೀಗ ಈ ಕನಸು ನೆರವೇರಿದೆ ಎಂದು ಶ್ರೀ ಮಠದ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.

Advertisement

ನನ್ನ ತಾಯಿ ಮೂಲತ ಕುಂದಾಪುರದವರಾಗಿದ್ದು, ನನ್ನ ತಾಯಿ ಕನ್ನಡತಿ ಎಂದು ಹಲವು ಬಾರಿ ಜ್ಯೂ. ಎನ್‌ಟಿಆರ್ ಸುದ್ದಿವಾಹಿನಿಗಳ ಸಂದರ್ಶನದಲ್ಲಿ ಹೇಳಿದ್ದರು. ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next