Advertisement

Udupi: ಅ.24-26: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ 23 ಗೋಷ್ಠಿಗಳು

01:33 AM Oct 20, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠ ಶ್ರೀ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಭಾರತೀಯ ವಿದ್ವತ್‌ ಪರಿಷತ್‌ ಆಶ್ರಯದಲ್ಲಿ ಅ.24ರಿಂದ 26ರ ವರೆಗೆ ನಡೆಯಲಿರುವ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ 23 ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ದೇಶದ ವಿವಿಧೆಡೆಗಳಿಂದ ವಿದ್ವಾಂಸರು ಪ್ರಬಂಧ ಮಂಡಿಸಲಿದ್ದಾರೆ.

Advertisement

ಗೋಷ್ಠಿಗಳು ಶ್ರೀ ಪುತ್ತಿಗೆ ಮಠ, ಗೀತಾಮಂದಿರ, ಶ್ರೀ ಕೃಷ್ಣಾಪುರ ಮಠ, ಪೇಜಾವರ ಮಠದ ಪ್ರಹ್ಲಾದ ಗುರುಕುಲ, ಸಂಸ್ಕೃತ ಕಾಲೇಜು ಹಾಗೂ ಶ್ರೀಕೃಷ್ಣಮಠದ ಸುತ್ತಮುತ್ತ ನಡೆಯಲಿದೆ. ವೇದ ವಿಚಾರ, ಭಗವದ್ಗೀತಾ ಅಧ್ಯಯನ, ಶಾಸ್ತ್ರೀಯ ಸಂಸ್ಕೃತ, ಆಧುನಿಕ ಸಂಸ್ಕೃತ, ಪಾಲೀ ಮತ್ತು ಬೌದ್ಧತಣ್ತೀ, ಪ್ರಾಕೃತ ಮತ್ತು ಜೈನತಣ್ತೀ, ಇತಿಹಾಸ(ಪುರಾತಣ್ತೀ, ತಾಳಿಪತ್ರ ಅಧ್ಯಯನ), ಭಾಷಾಶಾಸ್ತ್ರ ಮತ್ತು ವ್ಯಾಕರಣ, ತತ್ವಜ್ಞಾನ ಮತ್ತು ದರ್ಶನಗಳು, ಧರ್ಮ, ತಾಂತ್ರಿಕ ವಿಜ್ಞಾನ(ಕುಶಲಕಲೆ, ಸಂಸ್ಕೃತ, ಗಣಕಯಂತ್ರ), ಏಷ್ಯಾ ಅಧ್ಯಯನ, ಮಹಾಕಾವ್ಯಗಳು ಮತ್ತು ಪುರಾಣಗಳು, ಭಾರತೀಯ ಸೌಂದರ್ಯಶಾಸ್ತ್ರ ಮತ್ತು ಕಾವ್ಯಶಾಸ್ತ್ರ, ಭಾರತದ ಜ್ಞಾನಪರಂಪರೆ, ಭಾರತೀಯ ಶಾಸ್ತ್ರಗಳ ಪರಾಮರ್ಶೆ, ಇರಾನ್‌ ಇಸ್ಲಾಂ ಅರೇಬಿಯಾ ಮತ್ತು ಪರ್ಷಿಯಾದ ಅಧ್ಯಯನ, ಯೋಗ ಮತ್ತು ಆಯುರ್ವೇದ, ವೈಷ್ಣವ ಭಕ್ತಿಪರಂಪರೆಯ ಅಧ್ಯಯನ, ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ, ಮಕ್ಕಳ ಸಾಹಿತ್ಯ, ಬುಡಕಟ್ಟು ಸಂಸ್ಕೃತಿಯ ಅಧ್ಯಯನ ವಿಷಯವಾಗಿ ಗೋಷ್ಠಿಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next