Advertisement

Udupi: ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ: ಕಾರ್ಯಾಲಯ ಉದ್ಘಾಟನೆ

01:56 AM Oct 17, 2024 | Team Udayavani |

ಉಡುಪಿ: ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ 51ನೇ ಅಖೀಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನದ ಕಾರ್ಯಾಲಯ ಉದ್ಘಾಟನೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಜತೆಯಾಗಿ ಗೀತಾಮಂದಿರದಲ್ಲಿ ಉದ್ಘಾಟಿಸಿದರು.

Advertisement

ಈ ಸಮ್ಮೇಳನ ಸರ್ವರ ಸಹಕಾರದಿಂದ ವೈಭವೋಪೇತವಾಗಿ ಯಶಸ್ವಿಯಾಗಿ ನಡೆಯುವಂತಾಗಲಿ. ಜಗತ್ತಿನೆಲ್ಲೆಡೆ ತಣ್ತೀಜ್ಞಾನ ಪಸರುವಂತಾಗಲಿ ಎಂದು ಶ್ರೀಪಾದರು ಆಶೀರ್ವಚಿಸಿದರು.

ಪತ್ರಕರ್ತ ರವೀಂದ್ರ ಜೋಷಿ, ಮಠದ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ವಿ| ಪ್ರಸನ್ನ ಆಚಾರ್ಯ, ಪತಂಜಲಿ ಯೋಗ ಸಂಸ್ಥೆಯ ಪದಾಧಿಕಾರಿಗಳು, ಸಂಸ್ಕೃತ ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು. ಡಾ| ಗೋಪಾಲಾಚಾರ್ಯ ಸ್ವಾಗತಿಸಿ, ಡಾ| ಷಣ್ಮುಖ ಹೆಬ್ಟಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next