Advertisement

ಉದ್ಘರ್ಷ ಪೋಸ್ಟರ್‌ ಸಂಚಲನ

11:42 AM Aug 26, 2018 | |

ಕೆಲವು ಸಿನಿಮಾಗಳ ಟ್ರೇಲರ್‌, ಪೋಸ್ಟರ್‌ ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸುತ್ತದೆ. ಸಿನಿಮಾದಲ್ಲಿ ಏನಿರಬಹುದೆಂಬ ಲೆಕ್ಕಾಚಾರಕ್ಕೆ ಕಾರಣವಾಗುತ್ತವೆ. ಸದ್ಯ ಆ ತರಹದ ಕುತೂಹಲ, ಲೆಕ್ಕಾಚಾರಕ್ಕೆ ಕಾರಣವಾಗಿರೋದು “ಉದ್ಘರ್ಷ’. ಹಿರಿಯ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ “ಉದ್ಘರ್ಷ’ ಚಿತ್ರದ ಪೋಸ್ಟರ್‌ವೊಂದು ಈಗ ಸಖತ್‌ ಸೌಂಡು ಮಾಡುತ್ತಿದೆ.

Advertisement

ಜೊತೆಗೆ ದೇಸಾಯಿಯವರು ಬದಲಾಗಿರುವ ರೀತಿಗೂ ಹಿಡಿದ ಕನ್ನಡಿಯಂತಿದೆ. ಹುಡುಗಿಯ ರಕ್ತಸಿಕ್ತ ಕಾಲುಗಳನ್ನಷ್ಟೇ ಪೋಸ್ಟರ್‌ನಲ್ಲಿ ತೋರಿಸಿ, ಉಳಿದ ಕುತೂಹಲವನ್ನು ದೇಸಾಯಿ ಪ್ರೇಕ್ಷಕರಿಗೆ ಸುನೀಲ್‌ ಕುಮಾರ್‌ ದೇಸಾಯಿ ತುಂಬಾನೇ ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರ ಇದಾಗಿದ್ದು, “ಬ್ಯಾಟಲ್‌ ಅಟ್‌ ಇಟ್ಸ್‌ ಪೀಕ್‌’ ಎಂಬ ಟ್ಯಾಗ್‌ಲೈನ್‌ ಅನ್ನು ಚಿತ್ರಕ್ಕೆ ಕೊಟ್ಟಿದ್ದಾರೆ. ಈ ಚಿತ್ರ ಕೂಡಾ ದೇಸಾಯಿಯವರ ಫೇವರೇಟ್‌ ಜಾನರ್‌ ಆದ ಸಸ್ಪೆನ್ಸ್‌-ಥ್ರಿಲ್ಲರ್‌ಗೆ ಸೇರಿದೆ. 

“ಉದ್ಘರ್ಷ’ ಚಿತ್ರ ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಯೋಚಿಸಿರುವ ನಿರ್ದೇಶಕ ಸುನೀಲ್ಕುಮಾರ್‌ ದೇಸಾಯಿ, ಅದೇ ಕಾರಣಕ್ಕೇ ನಾಲ್ಕೂ ಭಾಷೆಗಳಿಗೆ ಸಲ್ಲುವ ಕಲಾವಿದರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ “ಸಿಂಗಂ 3′ ಖ್ಯಾತಿಯ ಠಾಕೂರ್‌ ಅನೂಪ್‌ ಸಿಂಗ್‌ ಮತ್ತು “ಕಬಾಲಿ’ ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್‌, ಕಬೀರ್‌ ಸಿಂಗ್‌ ದುಹಾನ್‌, “ಬಾಹುಬಲಿ’ ಖ್ಯಾತಿಯ ಪ್ರಭಾಕರ್‌, ಕಿಶೋರ್‌, ವಂಶಿಕೃಷ್ಣ, ಶ್ರವಣ್‌ ರಾಘವೇಂದ್ರ, ಶ್ರದ್ಧಾ ದಾಸ್‌ ಮುಂತಾದವರು ನಟಿಸಿದ್ದಾರೆ.

ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ದೇವರಾಜ್ ನಿರ್ಮಾಪಕರು. ಇವರೊಂದಿಗೆ ಅವರ ಗೆಳೆಯರಾದ ಮಂಜುನಾಥ್‌, ತಿರುಮಲೈ, ರಾಜೇಂದ್ರ ಕುಮಾರ್‌ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಸಂಜೋಯ್ ಚೌಧರಿ ಸಂಗೀತ ಸಂಯೋಜಿಸಿದ್ದಾರೆ. ವಿಷ್ಣು ವರ್ಧನ್‌ ಛಾಯಾಗ್ರಹಣವಿದೆ. ಕೆಂಪರಾಜು ಸಂಕಲನವಿದೆ. ರವಿವರ್ಮ ಸಾಹಸವಿದೆ. 

Advertisement

Udayavani is now on Telegram. Click here to join our channel and stay updated with the latest news.

Next