Advertisement

ನಾಲ್ಕು ಭಾಷೆಗಳಲ್ಲಿ ಉದ್ಘರ್ಷ

11:12 AM Aug 08, 2018 | Team Udayavani |

ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಸುನೀಲ್‌ಕುಮಾರ್‌ ದೇಸಾಯಿ. ಈಗಾಗಲೇ “ತರ್ಕ’, “ಉತ್ಕರ್ಷ’, “ನಿಷ್ಕರ್ಷ’, “ಸಂಘರ್ಷ’, “ಮರ್ಮ’ ಮತ್ತು “ಕ್ಷಣ ಕ್ಷಣ’ ಸೇರಿದಂತೆ ಅನೇಕ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳನ್ನು ಕೊಟ್ಟಿರುವ ಸುನೀಲ್ ಕುಮಾರ್‌ ದೇಸಾಯಿ, ಈಗ ಮತ್ತೂಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ.

Advertisement

ಆ ಚಿತ್ರಕ್ಕೆ “ಉದ್ಘರ್ಷ’ ಎಂಬ ಹೆಸರಿಟ್ಟು, ಈಗಾಗಲೇ ಸದ್ದಿಲ್ಲದೆಯೇ ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ, “ಉದ್ಘರ್ಷ’ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. “ಉದ್ಘರ್ಷ’ ಚಿತ್ರ ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಯೋಚಿಸಿರುವ ನಿರ್ದೇಶಕ ಸುನೀಲ್ ಕುಮಾರ್‌ ದೇಸಾಯಿ,

ಅದೇ ಕಾರಣಕ್ಕೇ ನಾಲ್ಕೂ ಭಾಷೆಗಳಿಗೆ ಸಲ್ಲುವ ಕಲಾವಿದರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ “ಸಿಂಗಂ 3′ ಖ್ಯಾತಿಯ ಠಾಕೂರ್‌ ಅನೂಪ್‌ ಸಿಂಗ್‌ ಮತ್ತು “ಕಬಾಲಿ’ ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್‌, ಕಬೀರ್‌ ಸಿಂಗ್‌ ದುಹಾನ್‌, “ಬಾಹುಬಲಿ’ ಖ್ಯಾತಿಯ ಪ್ರಭಾಕರ್‌, ಕಿಶೋರ್‌, ವಂಶಿಕೃಷ್ಣ, ಶ್ರವಣ್‌ ರಾಘವೇಂದ್ರ, ಶ್ರದ್ಧಾ ದಾಸ್‌ ಮುಂತಾದವರುನಟಿಸಿದ್ದಾರೆ. ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ಅತಿಥಿ ಪಾತ್ರ ಮಾಡಿದ್ದಾರೆ. 

ಈ ಚಿತ್ರಕ್ಕೆ ದೇವರಾಜ್ ನಿರ್ಮಾಪಕರು. ಇವರೊಂದಿಗೆ ಅವರ ಗೆಳೆಯರಾದ ಮಂಜುನಾಥ್‌, ತಿರುಮಲೈ , ರಾಜೇಂದ್ರ ಕುಮಾರ್‌ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಸಂಜೋಯ್ ಚೌಧರಿ ಸಂಗೀತ ಸಂಯೋಜಿಸಿದ್ದಾರೆ. ವಿಷ್ಣು ವರ್ಧನ್‌ ಛಾಯಾಗ್ರಹಣವಿದೆ. ಕೆಂಪರಾಜು ಸಂಕಲನವಿದೆ. ರವಿವರ್ಮ ಸಾಹಸವಿದೆ. ಇನ್ನು ನಿರ್ದೇಶನದ ಜೊತೆಗೆ ದೇಸಾಯಿಯವರೇ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next