Advertisement

Uddhav Thackeray ಪಕ್ಷದ ಅಭ್ಯರ್ಥಿ ಪರ ಮುಂಬಯಿ ಸ್ಫೋಟ ಆರೋಪಿ ಪ್ರಚಾರ?

01:43 AM May 11, 2024 | Team Udayavani |

ಮುಂಬಯಿ: ಮುಂಬಯಿಯ ವಾಯವ್ಯ ಕ್ಷೇತ್ರದ ಶಿವಸೇನೆ ಉದ್ಧವ್‌ ಬಣದ ಅಭ್ಯರ್ಥಿ ಅಮೋಲ್‌ ಕೀರ್ತಿಕರ್‌ ಪರವಾಗಿ 1993ರ ಮುಂಬಯಿ ಸ್ಫೋಟದ ಆರೋಪಿ ಇಕ್ಬಾಲ್‌ ಮೂಸಾ ಚುನಾವಣ ಪ್ರಚಾರ ನಡೆಸಿದ್ದಾನೆ ಎಂಬ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಮುಂಬಯಿ ಬಿಜೆಪಿ ಘಟಕದ ಅಧ್ಯಕ್ಷ ಆಶಿಶ್‌ ಶೆಲಾರ್‌ ಆಕ್ರೋಶ ವ್ಯಕ್ತಪಡಿಸಿದ್ದು, ಈ ವರೆಗಿನ ಚುನಾವಣೆ ರಾಷ್ಟ್ರೀಯವಾದಿಗಳು ಮತ್ತು ತುಕೆxà ತುಕೆxà ಗ್ಯಾಂಗಿನ ನಡುವಿನದಾಗಿತ್ತು. ಆದರೆ ಇನ್ನು ಮುಂದೆ ಭಾರತ ಮತ್ತು ಪಾಕಿಸ್ಥಾನ ನಡುವಿನ ಚುನಾವಣೆ ಆಗಲಿದೆ ಎಂದು ಟೀಕಿಸಿದ್ದಾರೆ. ಈ ಆರೋಪ ತಿರಸ್ಕರಿಸಿರುವ ಅಮೋಲ್‌ ಕೀರ್ತಿಕರ್‌ “ಇಕ್ಬಾಲ್‌ ರ್ಯಾಲಿಗೆ ಬಂದಿದ್ದು ನಮಗೆ ತಿಳಿದೇ ಇಲ್ಲ, ಇದು ಬಿಜೆಪಿಯದ್ದೇ ಪಿತೂರಿ ಎಂದು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next