Advertisement

ಎಐಎಂಐಎಂ ಮೈತ್ರಿ ಕೊಡುಗೆ ಬಿಜೆಪಿಯ ಸಂಚು: ಉದ್ಧವ್‌ ಠಾಕ್ರೆ

08:42 PM Mar 20, 2022 | Team Udayavani |

ಮುಂಬಯಿ: ಎಐಎಂಐಎಂನ ಮೈತ್ರಿ ಕೊಡುಗೆಯು ಬಿಜೆಪಿ ನಡೆಸಿರುವ ಒಳಸಂಚಿನ ಒಂದು ಭಾಗ ಎಂದು ಗಂಭೀರವಾಗಿ ಆರೋಪಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು, ಹಿಂದುತ್ವವಾದಿ ಪಕ್ಷವಾಗಿರುವ ಶಿವಸೇನೆಯು ಎಐಎಂಐಎಂನಂಥ ಪಕ್ಷಗಳ ಜತೆಗೆ ಯಾವತ್ತೂ ಮೈತ್ರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Advertisement

ಪಕ್ಷದ ಸಂಸದರು ಹಾಗೂ ಪದಾಧಿಕಾರಿಗಳ ಜತೆಯಲ್ಲಿ ವರ್ಚುವಲ್‌ ಸಭೆ ನಡೆಸಿದ ಅವರು ಹಿಂದುತ್ವ ಹಾಗೂ ಕೆಲವು ಪ್ರಮುಖ ವಿಷಯಗಳಲ್ಲಿ ಬಿಜೆಪಿ ನಡೆಯನ್ನು ಟೀಕಿಸಿದರು.

ಎಐಎಂಐಎಂಯ ಮೈತ್ರಿಯನ್ನು ಕೇಳಿದ್ದಾದರೂ ಯಾರು? ಇದು ಬಿಜೆಪಿಯ ಒಂದು ತಂತ್ರ ಹಾಗೂ ಸಂಚಿನ ಭಾಗವಾಗಿದೆ. ಬಿಜೆಪಿ ಹಾಗೂ ಎಐಎಂಐಎಂ ರಹಸ್ಯವಾಗಿ ಒಪ್ಪಂದ ಮಾಡಿಕೊಂಡಿದ್ದು, ಶಿವಸೇನೆಯನ್ನು ಅವಮಾನಿಸಲು ಮೈತ್ರಿಯ ಮಾತಾಡಿದ್ದಾರೆ. ಆ ಮೂಲಕ ಶಿವಸೇನೆಯ ಹಿಂದುತ್ವ ಸಿದ್ಧಾಂತವನ್ನು ಅವಮಾನಿಸಲು ಮುಂದಾಗಿದ್ದಾರೆ ಎಂದು ಠಾಕ್ರೆ ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ನಮ್ಮ ಪಕ್ಷವು ಶಿವಸೇನೆ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿದೆ ಎಂದು ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್‌ ಅವರು ಶನಿವಾರ ಹೇಳಿದ್ದರು. ಈ ಬಳಿಕ ಶಿವಸೇನೆಯ ರಾಜ್ಯಸಭಾ ಸದಸ್ಯ ರಾವುತ್‌ ಸಹಿತ ಪ್ರಮುಖ ನಾಯಕರು ಜಲೀಲ್‌ ಹೇಳಿಕೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next