Advertisement

ಅದಾನಿ ಪ್ರಧಾನಿಯ ‘ಪವಿತ್ರ ಗೋವು’ ; ಲೇವಡಿ ಮಾಡಿದ ಉದ್ಧವ್ ಶಿವಸೇನೆ

03:44 PM Feb 10, 2023 | Team Udayavani |

ಮುಂಬಯಿ : ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ‘ಗೋವಿನ ಅಪ್ಪುಗೆಯ ದಿನ’ ಉಪಕ್ರಮವನ್ನು ಶುಕ್ರವಾರ ಅಪಹಾಸ್ಯ ಮಾಡಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆ, ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಪವಿತ್ರ ಹಸು” ಎಂದು ಲೇವಡಿ ಮಾಡಿದೆ.

Advertisement

ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ “ಜನರು ಅದಾನಿ ಹಗರಣದ ಬಗ್ಗೆ ಪ್ರಧಾನಿಯಿಂದ ಸ್ಪಷ್ಟೀಕರಣವನ್ನು ಬಯಸುತ್ತಾರೆ, ಆದರೆ ಮೋದಿ ಸರಕಾರವು ಜನರನ್ನು ಸುಮ್ಮನಿರಲು ಮತ್ತೆ ಧರ್ಮದ ಪ್ರಮಾಣವನ್ನು ನೀಡಿದೆ. ಮೋದಿ ಸಂಸತ್ತಿನಲ್ಲಿ ಅದಾನಿ ಬಗ್ಗೆ ಮಾತನಾಡಲಿಲ್ಲ, ಆದರೆ ಅವರ ಸರ್ಕಾರ ಗೋವಿನ ಬಗ್ಗೆ ಮಾತನಾಡಿದೆ.” ಎಂದು ಬರೆದಿದೆ.

ಪ್ರಾಣಿ ಕಲ್ಯಾಣ ಮಂಡಳಿಯು “ಸಕಾರಾತ್ಮಕ ಶಕ್ತಿಯನ್ನು” ಹರಡಲು ಮತ್ತು “ಸಾಮೂಹಿಕ ಸಂತೋಷ” ವನ್ನು ಉತ್ತೇಜಿಸಲು ಪ್ರೇಮಿಗಳ ದಿನವನ್ನು ‘ಗೋವಿನ ಅಪ್ಪುಗೆಯ ದಿನ’ ಎಂದು ಆಚರಿಸಲು ಜನರನ್ನು ಒತ್ತಾಯಿಸುವ ಸಲಹೆಯನ್ನು ನೀಡಿದೆ. ಈ ಕ್ರಮಕ್ಕೆ ಬಿಜೆಪಿ ನಾಯಕರ ಬೆಂಬಲವಿದ್ದು ಅದನ್ನು ಅಪಹಾಸ್ಯ ಮಾಡುವ ಮೀಮ್ಸ್ ಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.

ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ವಂಚನೆ ಆರೋಪದ ನಂತರ ಕಳೆದ ಕೆಲವು ವಾರಗಳಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳ ಮೌಲ್ಯವು ಹೊಡೆತವನ್ನು ಅನುಭವಿಸಿದೆ. ಆರೋಪಗಳನ್ನು ಅದಾನಿ ಸಮೂಹ ತಳ್ಳಿಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next